ಉಡುಪಿ: ಶ್ರೀಕೃಷ್ಣ ಮಠದಲ್ಲಿ ಫೆ.6ರ ವರೆಗೆ ಶ್ರೀ ಮಧ್ವನವಮಿ ಉತ್ಸವ – vishwanews24
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಫೆ.6ರ ವರೆಗೆ ಶ್ರೀ ಮಧ್ವನವಮಿ ಉತ್ಸವ
ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ, ಶ್ರೀಕೃಷ್ಣ ಮಠ ಹಾಗೂ ತುಳು ಶಿವಳ್ಳಿ ಮಾಧ್ವಬ್ರಾಹ್ಮಣ ಮಹಾಮಂಡಲದ ಸಹಯೋಗದಲ್ಲಿ ಶ್ರೀಮಧ್ವನವಮಿ ಉತ್ಸವವು ಜ.30ರಂದು ಆರಂಭಗೊಂಡಿದ್ದು, ಫೆ.6ರ ವರೆಗೆ ನಡೆಯಲಿದೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಹಾಗೂ ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಅವರು ಶ್ರೀಕೃಷ್ಣ ಮಠದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಫೆ.4ರಂದು ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ವಿದ್ವಾಂಸರಿಂದ ಆಚಾರ್ಯ ಮಧ್ವ ವಿರಚಿತ ಸರ್ವಮೂಲಗ್ರಂಥಗಳ ಪಾರಾಯಣ, ಫೆ.6ರಂದು ಬೆಳಗ್ಗೆ 8.30ಕ್ಕೆ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಬೆಂಗಳೂರಿನ ಭಕ್ತರಿಂದ ಶ್ರೀನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಮಧ್ವ ವಿಜಯ ಪಾರಾಯಣ, 324 ವಿಪ್ರರಿಂದ ತ್ರಿವಿಕ್ರಮ ಪಂಡಿತಾಚಾರ್ಯ ವಿರಚಿತ ವಾಯುಸ್ತುತಿ ಪಾರಾಯಣ ಪೂರ್ವಕ ಪರ್ಯಾಯ ಶ್ರೀಪಾದರಿಂದ ಮಧು ಅಭಿಷೇಕ ನಡೆಯಲಿದೆ ಎಂದರು.
ಕಾಪು ಹೊಸ ಮಾರಿಗುಡಿ ದೇವಸ್ಥಾನ : ಫೆ. 4ರಂದು ನವಚಂಡೀಯಾಗ, ಮಹಾ ಅನ್ನಸಂತರ್ಪಣೆ – vishwanews24
ಶ್ರೀಕೃಷ್ಣ ಮಠ ಹಾಗೂ ಶ್ರೀ ಅನಂತೇಶ್ವರ ಸನ್ನಿಧಿಯಲ್ಲಿ ಡಾ| ಅರಳುಮಲ್ಲಿಗೆ ಪಾರ್ಥಸಾರಥಿಯವರ ಶಿಷ್ಯ ವೃಂದದಿಂದ ವಿಷ್ಣುಸಹಸ್ರನಾಮ ಹಾಗೂ ವಾಯುಸ್ತುತಿ ಪಾರಾಯಣ ಜರಗಲಿದೆ. ಆಕ್ಸ್ಫರ್ಡ್ ವಿವಿಯಲ್ಲಿದ್ದ ಸುಮಾರು 600 ವರ್ಷಗಳಿಗೂ ಹಿಂದಿನ ನೇವಾರಿ ಲಿಪಿಯ ಲಿಖೀತ ಭಗವದ್ಗೀತೆ ವೇಫರ್ಫಿಚೆ ಪ್ರತಿಯನ್ನು ತಾರಾ ಪ್ರಕಾಶನ ಸಂಸ್ಥೆಯು ಮಧ್ವನವಮಿಯ ಸಂದರ್ಭದಲ್ಲಿ ರಾಜಾಂಗಣದಲ್ಲಿ ಪರ್ಯಾಯ ಶ್ರೀಪಾದರು ಬಿಡುಗಡೆಗೊಳಿಸಲಿದ್ದಾರೆ.
ವಿವಿಧ ಕ್ಷೇತ್ರಗಳ ಪ್ರತಿನಿಧಿಗಳಿಗೆ ಶ್ರೀಕೃಷ್ಣಗೀತಾನುಗ್ರಹ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು.
ಪ್ರತಿದಿನ ಸಂಜೆ 7ರಿಂದ 9ರ ವರೆಗೆ ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಜ.31ರಂದು ಯಕ್ಷಗಾನ, ಫೆ.1ರಂದು ಭರತನಾಟ್ಯ, ಫೆ.2ರಂದು ನೃತ್ಯಸಂಭ್ರಮ, ಫೆ.3ರಂದು ಭರತನಾಟ್ಯ, ಫೆ.4ರಂದು ನಾಟಕ-ಸದಾಚಾರಸ್ಮತಿ, ಫೆ.5ರಂದು ಯಕ್ಷಗಾನ- ಹಂಸಾನ್ವಯ ದಿಗ್ವಿಜಯ, ಫೆ.6ರಂದು ದಾಸಲಹರಿ, ಫೆ.7ರಂದು ಭರತನಾಟ್ಯ ನಡೆಯಲಿದೆ.
ಉಡುಪಿ : ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ದಂಧೆ – ಪೊಲೀಸರ ದಾಳಿ ; ಓರ್ವ ಯುವತಿಯ ರಕ್ಷಣೆ – vishwanews24
ಪ್ರತಿದಿನ ಸಂಜೆ 5.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಧ್ವಾಚಾರ್ಯರು ನಡೆದಾಡಿದ ಕ್ಷೇತ್ರಗಳ ಅರ್ಚಕರಿಗೆ ಸಮ್ಮಾನ ಹಾಗೂ ಡಾ| ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರಿಂದ ಶ್ರೀಮಧ್ವವಿಜಯದಲ್ಲಿ ಗೀತಾಚಿಂತನೆ ಉಪನ್ಯಾಸ ನಡೆಯಲಿದೆ ಎಂದು ಪುತ್ತಿಗೆ ಮಠದ ರಮೇಶ್ ಭಟ್ ತಿಳಿಸಿದರು.
ಮಹಿತೋಷ್ ಆಚಾರ್ಯ, ಉದ್ಯಮಿ ವಿಜಯರಾಘವ ರಾವ್ ಉಪಸ್ಥಿತರಿದ್ದರು.
