ಉದ್ಯಮಿ, ಬಿಜೆಪಿಯ ಹಿರಿಯ ನಾಯಕ ಸುಧೀರ್ ಘಾಟೆ ನಿಧನ : ಜಿಲ್ಲಾ ಬಿಜೆಪಿ ತೀವೃ ಸಂತಾಪ -Vishwanews24

ಉಡುಪಿ

ಉದ್ಯಮಿ, ಬಿಜೆಪಿಯ ಹಿರಿಯ ನಾಯಕ ಸುಧೀರ್ ಘಾಟೆ ನಿಧನ : ಜಿಲ್ಲಾ ಬಿಜೆಪಿ ತೀವೃ ಸಂತಾಪ -Vishwanews24

ಉಡುಪಿ : ಬಿಜೆಪಿ ಯ ಹಿರಿಯ ನಾಯಕರು, ಅದ್ಭುತ ಚಿಂತಕರು , ಸಂಘದ ಕಟ್ಟಾಳು, ಶ್ರೀ ಸುಧೀರ್ ಪ್ರಭಾಕರ ಘಾಟೆ (64) ಅವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಅವರು ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ.

ಸುಧೀರ್ ಘಾಟೆ ಅವರ ನಿಧನದಿಂದ ಪಕ್ಷ ಓರ್ವ ಅಧ್ಬುತ ಚಂತಕರನ್ನು ಕಳೆದುಕೊಂಡಿದೆ ಎಂದು ತಿಳಿಸಿರುವ ಕುಯಿಲಾಡಿ, ಕುಟುಂಬ ಹಾಗೂ ಬಂಧು ಮಿತ್ರರಿಗೆ ಅವರ ನಿಧನದ ದು:ಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಮತ್ತು ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.