ಉಳ್ಳಾಲ : ಪೊಲೀಸ್ ಕಾನ್ಸ್ಟೇಬಲ್ ಗೆ ಜೀವ ಬೆದರಿಕೆ ಪ್ರಕರಣ : ಆರೋಪಿ ಸೆರೆ – vishwanews24
ಉಳ್ಳಾಲ : ಪೊಲೀಸ್ ಕಾನ್ಸ್ಟೇಬಲ್ ಗೆ ಜೀವ ಬೆದರಿಕೆ ಪ್ರಕರಣ : ಆರೋಪಿ ಸೆರೆ
ಉಳ್ಳಾಲ : ಪೊಲೀಸ್ ಕಾನ್ಸ್ಟೇಬಲ್ ಲಕ್ಷ್ಮೀ.ಜಿ.ಆರ್. ಅವರಿಗೆ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿದ ಘಟನೆ ಉಳ್ಳಾಲ ಠಾಣೆ ಬಳಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸೋಮೇಶ್ವರ ನಿವಾಸಿ ಸುಕೇಶ್ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈತ ಕಾರಿನಲ್ಲಿ ಠಾಣೆಯ ಆವರಣಕ್ಕೆ ಬಂದಿದ್ದ ಈ ವೇಳೆ ಇನ್ಸ್ಪೆಕ್ಟರ್ ಕಾರು ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಇದರ ಬಳಿಕ ಪೊಲೀಸ್ ಕಾನ್ಸ್ಟೇಬಲ್ ಲಕ್ಷ್ಮೀ.ಜಿ.ಆರ್. ಬಳಿ ತೆರಳಿದ್ದು, ಈ ವೇಳೆ ಆತ ಸಿಬ್ಬಂದಿ ಗೆ ಅವಾಚ್ಯ ಶಬ್ದಗಳಿಂದ ಬೈದು ಏಕವಚನದಲ್ಲಿ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಹಲ್ಲೆಗೆ ಯತ್ನಿಸಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ಪ್ರಕರಣದಲ್ಲಿ ದಾಖಲಿಸಲಾಗಿದೆ.
ಬಾಗಲಕೋಟೆ : ಬಡ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಕ್ರಿಕೆಟಿಗ ರಿಷಭ್ ಪಂತ್ ಆರ್ಥಿಕ ನೆರವು – vishwanews24
