ಎನ್ ಡಿ ಎ ಅಭ್ಯರ್ಥಿಗಳ ಗೆಲುವಿಗಾಗಿ ಜಿಲ್ಲಾ ಬ್ರಾಹ್ಮಣ ಸಮಾಜ ಸಂಪೂರ್ಣ ಸಹಕಾರ – vishwanews24

Featured, ಉಡುಪಿ

ಎನ್ ಡಿ ಎ ಅಭ್ಯರ್ಥಿಗಳ ಗೆಲುವಿಗಾಗಿ ಜಿಲ್ಲಾ ಬ್ರಾಹ್ಮಣ ಸಮಾಜ ಸಂಪೂರ್ಣ ಸಹಕಾರ : ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಎಸ್. ದತ್ತಾತ್ರಿ ಹೇಳಿಕೆ

ನೈರುತ್ಯ ಪದವೀಧರ ಹಾಗು ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆ ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಎಸ್. ದತ್ತಾತ್ರಿ ಅವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾದ ಡಾ ಧನಂಜಯ ಸರ್ಜಿ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಅವರ ಗೆಲುವಿಗಾಗಿ ಅವರ ಪರವಾಗಿ ಮತಯಾಚಿಸಿ ಬೆಂಬಲಿಸುವಂತೆ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಚುನಾವಣೆಯಲ್ಲಿ ಜಿಲ್ಲಾ ಬ್ರಾಹ್ಮಣ ಸಮಾಜ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.

May be an image of 8 people, people studying, newsroom and text that says "ಶಿವಮೊಗ್ಡ ಪ್ರೆಸ್ ಸ್ ಶಿವಮೊಗ್ಣೆಸ್‌ನತ್ಣ್ ಟ HIVAMOGGA HIVAMOGGAPRESSTRI PRESS TRU ಶಿವಮೊಗ್ಗ ಪ್ರೆಸ್ ಪ್ರಸ್ಟ್"

ಈ ವೇಳೆ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷರು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಪದ್ಮಿನಿ ರಾವ್ , ಶಿವಮೊಗ್ಗ ಗ್ರಾಮಾಂತರದ ಮಂಡಲದ ಮಾಜಿ ಅಧ್ಯಕ್ಷರಾದ ರತ್ನಾಕರ ಶೆಣೈ , ಜಿಲ್ಲಾ ಪ್ರಕೋಷ್ಟಗಳ ಸಂಯೋಜಕರಾದ ಹೃಷಿಕೇಶ್ ಪೈ , ಸೊರಬ ಮಂಡಲದ ಅಧ್ಯಕ್ಷರಾದ ತಲಕಾಲಕೊಪ್ಪ ಪ್ರಕಾಶ್ , ಜಿಲ್ಲಾ ಸಹ ಮಾಧ್ಯಮ ಪ್ರಮುಖರು ಮಾಹಿತಿ ತಂತ್ರಜ್ಞಾನದ ಸಂಚಾಲಕರಾದ ಸುಧೀಂದ್ರ ಕಟ್ಟೆ, ರಾಜ್ಯ ಮಾಹಿತಿ ತಂತ್ರಜ್ಞಾನದ ಪ್ರಕೋಷ್ಟಗಳ ಸದಸ್ಯರಾದ ಪ್ರಶಾಂತ್ ಪಂಡಿತ್, ಭದ್ರಾವತಿ ಮಂಡಲದ ಉಪಾಧ್ಯಕ್ಷರಾದ ಸುಬ್ರಮಣ್ಯ, ಭದ್ರಾವತಿ ನಗರ ಕಾರ್ಯಕಾರಣಿ ಸದಸ್ಯರಾದ ರಾಘವೇಂದ್ರ ಆಚಾರ್ , ಮಾಜಿ ಜಿಲ್ಲಾ ಉಪಾಧ್ಯಕ್ಷರಾದ ಬಿ. ಆರ್. ಮಧುಸೂಧನ, ಮ್ಯಾಮ್ ಕೋಸ್ ನಿರ್ದೇಶಕರು ಮತ್ತು ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಕೆ. ವಿ. ಕೃಷ್ಣಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ ಕೆಮ್ಮಿದ ಮಗು- vishwanews24

Leave a Reply