ಎಪ್ರಿಲ್ ೧೨ ರಂದು ಮಲ್ಪೆಯಿಂದ ಉಡುಪಿವರೆಗೆ ಚೌಕಿದಾರ್ ಸೈಕಲ್ ಜಾಥ: ರಘಪತಿ ಭಟ್
ಎಪ್ರಿಲ್ ೧೨ ರಂದು ಮಲ್ಪೆಯಿಂದ ಉಡುಪಿವರೆಗೆ ಚೌಕಿದಾರ್ ಸೈಕಲ್ ಜಾಥ: ರಘಪತಿ ಭಟ್
ಉಡುಪಿ: ನರೇಂದ್ರ ಮೋದಿಯವರಿಗೆ ಬೆಂಬಲ ನೀಡುವ ಸಲುವಾಗಿ ಉಡುಪಿಯಲ್ಲಿ ಮಲ್ಪೆ ಬೀಚ್ ನಿಂದ ಕಡಿಯಾಳಿಯ ಬಿಜೆಪಿ ಕಚೇರಿಯವರೆಗೆ ಚೌಕಿದಾರ್ ಸೈಕಲ್ ಜಾಥ ನಡೆಯಲಿದೆ ಎಂದು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಶಾಸಕ ರಘಪತಿ ಭಟ್ ಹೇಳಿದರು.
ಜಾಥದ ಉದ್ದೇಶದಿಂದ ಮೊಬೈಲ್ ಆ್ಯಪ್ ತಯಾರಿಸಿದ್ದು ಆ ಮೂಲಕ ರಿಜಿಸ್ಟ್ರೇಷನ್ ಮಾಡಿ ಕೂಡ ಭಾಗವಹಿಸಬಹುದು.
ಭಾಗವಹಿಸಿದ ಎಲ್ಲರಿಗೂ ನಾನು ಚೌಕಿದಾರ್ ಸರ್ಟಿಫಿಕೇಟ್ ನೀಡುಲಾಗುವುದು ಎಂದರು.
ನಾನು ಚೌಕಿದಾರ್ ಸ್ಟಿಕ್ಕರ್ ತೆಗೆಯುವ ಪ್ರಯತ್ನ ನಡೆಯುತ್ತಿದೆ ಇದು ಅತ್ಯಂತ ಬೇಸರದ ಸಂಗತಿ, ಮೋದಿ ಬೆಂಬಲಿಸುವುದು ನಮ್ಮ ಕರ್ತವ್ಯ ಎಂದರು.
ಮಹೇಶ್ ಠಾಕೂರು,ಪ್ರಭಾಕರ್ ಪೂಜಾರಿ, ಪ್ರತಾಪ್ ಶೆಟ್ಟಿ,ದೀಪಕ್,ಶ್ರೀಶಾ ನಾಯಕ್ ಉಪಸ್ಥಿತಿತರಿದ್ದರು.

