ಐದು ವರ್ಷಗಳ ನರೇಂದ್ರ ಮೋದಿ ನೇತೃತ್ವದ ಆಡಳಿತ ಅತಿ ಆಘಾತಕಾರಿಯಾಗಿತ್ತು :ಮನಮೋಹನ್‌ ಸಿಂಗ್‌ -Vishwanews24

Featured, ರಾಷ್ಟ್ರ ನ್ಯೂಸ್

ಹೊಸದಿಲ್ಲಿ: ಕಳೆದ ಐದು ವರ್ಷಗಳ ನರೇಂದ್ರ ಮೋದಿ ನೇತೃತ್ವದ ಆಡಳಿತ ದೇಶದ ಯುವಕರು, ರೈತರು, ವ್ಯಾಪಾರಿಗಳು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ಅತಿ ಆಘಾತಕಾರಿಯಾಗಿತ್ತು ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಹೇಳಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಸ್ವಾತಂತ್ರ್ಯ ನಂತರ ದೇಶದಲ್ಲಿ ನಡೆದ ಅತಿದೊಡ್ಡ ಹಗರಣ ಎಂದರೆ ನೋಟು ಅಮಾನ್ಯೀಕರಣ. ಪಾಕಿಸ್ತಾನದ ಕುರಿತು ಮೋದಿ ಸರಕಾರ ಅನುಸರಿಸಿದ ನೀತಿ ಕೂಡ ಅಜಾಗರೂಕತೆಯಿಂದ ಕೂಡಿತ್ತು. ಪಠಾಣ್‌ಕೋಟ್‌ ವಾಯುನೆಲೆ ಮೇಲಿನ ದಾಳಿ ಮೋದಿ ಸರಕಾರದ ಭದ್ರತಾ ವೈಫಲ್ಯದ ಪರಿಣಾಮವಲ್ಲವೇ ಎಂದು ಸಿಂಗ್‌ ಪ್ರಶ್ನಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಪ್ರಕರಣಗಳು ಶೇ. 176ರಷ್ಟು ಹೆಚ್ಚಿದೆ. ಕದನವಿರಾಮ ಉಲ್ಲಂಘನೆ ಕೂಡ ಏರಿಕೆಯಾಗಿದೆ. ಎಲ್ಲರನ್ನೂ ಒಟ್ಟಾಗಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಬದಲು ಪ್ರಧಾನಿ ಮೋದಿಗೆ ಕೇವಲ ರಾಜಕೀಯ ಅಸ್ತಿತ್ವ ಮಾತ್ರ ಮುಖ್ಯವಾಗಿದೆ. ಹಾಗಾಗಿ ಕೋಮುಸೌಹಾರ್ದತೆ ಕದಡುತ್ತಿದ್ದಾರೆ ಎಂದು ಸಿಂಗ್‌ ಕಿಡಿಕಾರಿದ್ದಾರೆ.