ಒಂದು ಸಾವಿರ ಕೊಡ್ತಿನಂದ್ರೂ ಕಾಂಗ್ರೆಸ್ ಅಭ್ಯರ್ಥಿ ಹೆಗ್ಡೆ ಪರ ಫೀಲ್ಡಿಗೆ ಇಳಿಯದ ಉತ್ತರ ಕರ್ನಾಟಕದ ಕಾರ್ಮಿಕರು : ಕಾಂಗ್ರೆಸ್ ನಾಯಕರಿಗೆ ಮುಖಭಂಗ : vishwanews24
ಒಂದು ಸಾವಿರ ಕೊಡ್ತಿನಂದ್ರೂ ಕಾಂಗ್ರೆಸ್ ಅಭ್ಯರ್ಥಿ ಹೆಗ್ಡೆ ಪರ ಫೀಲ್ಡಿಗೆ ಇಳಿಯದ ಉತ್ತರ ಕರ್ನಾಟಕದ ಕಾರ್ಮಿಕರು : ಕಾಂಗ್ರೆಸ್ ನಾಯಕರಿಗೆ ಮುಖಭಂಗ
ಉಡುಪಿ: ಲೋಕಸಭಾ ಚುನಾವಣೆಯ ಕೊನೆಯ ಹಂತದ ಪ್ರಚಾರ ಮುಗಿಯುವ ಹೊಸ್ತಿಲಲ್ಲಿ ಕೂಡ ಕಾಂಗ್ರೆಸ್ ಪರ ಜನ ಮತಯಾಚನೆಗೆ ಆಸಕ್ತಿ ತೋರಿಸುತ್ತಿಲ್ಲ ಇನ್ನೊಂದು ಕಡೆಯಲ್ಲಿ ಒಂದು ಸಾವಿರ ರೂಪಾಯಿ ಸಂಬಳ ಕೊಡುತ್ತೇವೆಂದರೂ ಕೂಡ ಉತ್ತರ ಕರ್ನಾಟಕ ಭಾಗದ ಕಾರ್ಮಿಕರೂ ಕೂಡ ಕಾಂಗ್ರೆಸ್ ಪಾರ್ಟಿಯ ಫೀಲ್ಡಿಗೆ ಹೋಗಲು ನಿರಾಸಕ್ತಿ ತೋರಿಸಿದ ಘಟನೆ ನಡೆದಿದೆ.
ಕೆಲವೊಂದು ಪ್ರದೇಶಗಳಲ್ಲಿ ಮೊದಲ ಸುತ್ತಿನ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯ ಪರ ಮತಯಾಚನೆ ನಡಿದಿಲ್ಲ ಕಾರಣ ಕಾರ್ಯಕರ್ತ ಹಾಗೂ ಕಾಂಗ್ರೆಸ್ ಪರವಾದ ಮತದಾರರ ಕೊರತೆ ಹೀಗಾಗಿ ಉತ್ತರ ಕರ್ನಾಟಕ ಭಾಗದ ಕಾರ್ಮಿಕರನ್ನು ಕರೆದುಕೊಂಡು ಹೋಗಿ ಪೀಲ್ಡ್ ಮಾಡಿಸುವ ಪ್ಲ್ಯಾನ್ ಮಾಡಿದ್ದ ಬೂತ್ ಮಟ್ಟದ ಅಧ್ಯಕ್ಷರುಗಳಿಗೆ ಕಾರ್ಮಿಕರು ಹಿಂದೇಟು ಹಾಕಿದ ಪರಿಣಾಮ ಮುಖಭಂಗವಾಗಿದೆ.
ಅತ್ತ ಕಾಂಗ್ರೆಸ್ ಕಾರ್ಯಕರ್ತರು ಇಲ್ಲದೆ ಇತ್ತ ಸಂಬಳ ನೀಡಿದರೂ ಮತಯಾಚನೆ ಬಾರದಿರುವ ಕಾರ್ಮಿಕರ ನಿಲುವಿನಿಂದಾಗಿ ಕೈ ಪಾರ್ಟಿ ನಾಯಕರಿಗೆ ಜಯಪ್ರಕಾಶ್ ಹೆಗ್ಡೆ ಗೆಲ್ಲಿಸುವುದು ಬಿಡಿ ಅವರ ಹೆಸರನ್ನು ಇನ್ನೂ ಮನೆಮನೆಗೆ ಮುಟ್ಟಿಸಲಾಗಿಲ್ಲವೆಂಬ ಮಾತು ಕೇಳಿ ಬಂದಿದೆ.
