ಕಂಚಿನಡ್ಕದ ಮಿಂಚಿನ ಬಾವಿ ಕ್ಷೇತ್ರ ಗುಳಿಗನ ಕಟ್ಟೆ ನಿರ್ಮಾಣ – ಅಪಸ್ವರ ಎತ್ತಿದ ಮುಸ್ಲಿಂ ಬಣ- ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್
ಕಂಚಿನಡ್ಕದ ಮಿಂಚಿನ ಬಾವಿ ಕ್ಷೇತ್ರ ಗುಳಿಗನ ಕಟ್ಟೆ ನಿರ್ಮಾಣ – ಅಪಸ್ವರ ಎತ್ತಿದ ಮುಸ್ಲಿಂ ಬಣ- ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್
ಕಾಪು: ಕಳೆದ ಒಂದು ವಾರದಿಂದ ಉಡುಪಿ ಜಿಲ್ಲೆಯ ಕಂಚಿನಡ್ಕ ದ ಮಿಂಚಿನ ಬಾವಿ ಕ್ಷೇತ್ರದಲ್ಲಿ ನಿರ್ಮಾಣವಾಗುವಂತೆ ತಗಡು ಚಪ್ಪರ ವಿವಾದ ಮತ್ತೆ ಹೊಸ ರೂಪವನ್ನು ಪಡೆದುಕೊಂಡಿದೆ.
ಆದಿತ್ಯವಾರ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಂದ ಕರಸೇವೆ ನಡೆದ ನಂತರ ನೂತನವಾಗಿ ಗುಳಿಗನ ಕಟ್ಟೆ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ಮುಸ್ಲಿಂ ಪರ ಸಂಘಟನೆಗಳ ಕಾರ್ಯಕರ್ತರು ಕ್ಷೇತ್ರದ ಮುಂಭಾಗದಲ್ಲಿ ಸೇರಿದರು.
ಆದರೇ ಕ್ಷೇತ್ರದ ಹಿರಿಯರು ಹೇಳುವ ಪ್ರಕಾರ ಹೊಸತಾಗಿ ಯಾವುದೇ ಕಟ್ಟೆ ನಿರ್ಮಾಣ ಮಾಡಿಲ್ಲ ಈ ಹಿಂದೆ ಅದೇ ಜಾಗದಲ್ಲಿ ಗುಳಿಗನ ಸಾನಿಧ್ಯವಿತ್ತು ಅದನ್ನು ಇಂದು ಕರಸೇವೆಯ ದಿನದಂದು ಕಟ್ಟೆಯನ್ನು ಪುನಶ್ಚೇತನ ಮಾಡಲಾಗಿದೆ ಹೊರತು ಹೊಸತು ಯಾವುದು ನಿರ್ಮಾಣವಾಗಿಲ್ಲ ಎಂಬುದಾಗಿದೆ.
ಈ ವಿಷಯ ತಿಳಿದ ಹಿಂದೂಪರ ಸಂಘಟನೆಗಳು ಕೂಡ ಕ್ಷೇತ್ರದ ಮುಂಭಾಗದಲ್ಲಿ ಸೇರಿಕೊಂಡಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪಡುಬಿದ್ರಿ ಪೊಲೀಸರು ಆಗಮಿಸಿದ್ದಾರೆ.
