ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡ ಪಾಣರರ ಮನೆಗೆ ಭೇಟಿ ನೀಡಿ ಗೌರವ ಸಲ್ಲಿಸಿದ ಬಿಜೆಪಿ ಮುಖಂಡ ಶ್ರೀಶ ನಾಯಕ್ ಮತ್ತು ತಂಡ:vishwanews24
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡ ಪಾಣರರ ಮನೆಗೆ
ಭೇಟಿ ನೀಡಿ ಗೌರವ ಸಲ್ಲಿಸಿದ ಬಿಜೆಪಿ ಮುಖಂಡ ಶ್ರೀಶ ನಾಯಕ್ ಮತ್ತು
ತಂಡ:vishwanews24
ಕಾಪು: ೨೦೨೨ ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಕಾಪು ತಾಲೂಕಿನ ಮೂಳೂರು ಗ್ರಾಮದ ದೈವನರ್ತಕ ಗುಡ್ಡ ಪಾಣರ ಅವರ ಮನೆಗೆ ಉಡುಪಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಶ ನಾಯಕ್ ಮತ್ತು ತಂಡ ಭೇಟಿ ನೀಡಿ ಗೌರವ ಸಲ್ಲಿಸಿದರು.

ಸುಮಾರು ೪೮ ವರ್ಷಗಳಿಂದ ಕರಾವಳಿ ಭಾಗದಲ್ಲಿ ವಿವಿಧ ದೈವಗಳ ಸೇವೆ ಸಲ್ಲಿಸುತ್ತಿರುವ ಪಾಣರ ಇವರು ಕಳೆದ ೩೮ ವರ್ಷಗಳಿಂದ ಕಾಪು ಗುರು ಬ್ರಹ್ಮ ಮುರ್ಗೆಕಲ ದೈವಸ್ಥಾನದಲ್ಲಿ ಪಿಲಿಚಂಡಿ ದೈವಕ್ಕೆ “ಪಿಲಿಕೋಲ” ದ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಪ್ರಶಸ್ತಿಗೆ ಅರ್ಜಿ ಹಾಕದೇ ರಾಜ್ಯದ ಮಹೋನ್ನತ ಪ್ರಶಸ್ತಿಗೆ ಭಾಜನರಾಗಿರುವ ಗುಡ್ಡ ಪಾಣರ ಅವರ ಮನೆಗೆ ಸೋಮವಾರ ಬೆಳಗ್ಗೆ ಭೇಟಿ ನೀಡಿದ ಶ್ರೀಶ ನಾಯಕ್ ಹಾರ-ತುರಾಯಿಗಳೊಂದಿಗೆ ಸನ್ಮಾನಿಸಿ ಗೌರವ ಸಲ್ಲಿಸಿ ಆರ್ಶಿವಾದ ಪಡೆದುಕೊಂಡರು.

ತದನAತರ ಮಾಧ್ಯಮದ ಜತೆ ಮಾತನಾಡಿದ ಅವರು”ನವ ಭಾರತದಲ್ಲಿ ಪ್ರಶಸ್ತಿಗಳ ಹಿಂದೆ ಹೋಗುವ ಕಾಲ ಕಳೆದು ಹೋಗಿದೆ ಈಗ ಏನಿದ್ದರು ಅರ್ಹರ ಮನೆಗೆ ಪ್ರಶಸ್ತಿ ಹುಡುಕಿಕೊಂಡು ಬರುತ್ತಿದೆ ಅಂತಹದೇ ಕೆಲಸ ಇಂದು ರಾಜ್ಯ ಸರ್ಕಾರ ಮಾಡಿದೆ. ತುಳುನಾಡು ಎಂಬುದು ದೈವ ದೇವರ ನೆಲೆಬೀಡು ಅಂತಹ ಪುಣ್ಯದ ಮಣ್ಣಿನಲ್ಲಿ ಹುಟ್ಟಿ ಬೆಳೆದು ನಿರಂತರ ೪೮ ವರ್ಷಗಳಿಂದ ದೈವನರ್ತಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಈ ಪ್ರಶಸ್ತಿ ಹರಸಿ ಬಂದಿರುವುದು ಹರ್ಷ ತಂದಿದೆ ಎಂದರು.

ಈ ಸಂಧರ್ಭದಲ್ಲಿ ಅಲ್ಪ ಸಂಖ್ಯಾತ ಮೋರ್ಚದ ಅಧ್ಯಕ್ಷ ದಾವೂದ್ ಅಬೂಬ್ಬಕ್ಕರ್, ಅನಿಲ್ ಶೆಟ್ಟಿ ಮಾಂಬೆಟ್ಟು, ಪುರಸಭಾ ಸದಸ್ಯ ಅನಿಲ್ ಕುಮಾರ್ ಕಾಪು, ನವೀನ್ ಎಸ್.ಕೆ, ಪ್ರವೀಣ್ ಪೂಜಾರಿ ಉಪಸ್ಥಿತರಿದ್ದರು.
