ಕಲಬುರಗಿ: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳ ಕಡಿತ ಮಾಡುವುದಿಲ್ಲ ಹಾಗೂ ಕೈ ಬಿಡುವುದಿಲ್ಲ : ಶರಣಪ್ರಕಾಶ ಪಾಟೀಲ್ – vishwanews24

Featured, ರಾಜ್ಯ ನ್ಯೂಸ್

ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಹೊಸ ಕಂಡಿಷನ್  ಮಾಡುವುದಿಲ್ಲ : ಶರಣಪ್ರಕಾಶ ಪಾಟೀಲ್

ಕಲಬುರಗಿ: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳ ಕಡಿತ ಮಾಡುವುದಿಲ್ಲ ಹಾಗೂ ಕೈ ಬಿಡುವುದಿಲ್ಲ. ಜತೆಗೆ ಯಾವುದೇ ಹೊಸ ಕಂಡಿಷನ್ ಸಹ ಮಾಡುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.

ಗ್ಯಾರಂಟಿಗಳಿಗೆ ವಿರೋಧ ಪಕ್ಷದವರು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಮಾನಿಟರಿಂಗ್ ಕಮಿಟಿ ಮಾಡಿದ್ದೇವೆ. ಅದಕ್ಕೂ ತಪ್ಪಾಗಿ ಮಾತನಾಡುತ್ತಿದ್ದಾರೆ. ಇದರಿಂದ ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಅವರಿಗೆ ಮಾನ -ಮರ್ಯಾದೆ ಏನು ಇಲ್ಲ ಎಂದು ತಿರುಗೇಟು ನೀಡಿದರು.

ಕುಟುಂಬ ಸಮೇತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ನಟ ಪ್ರಭುದೇವ್  – vishwanews24

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ಎಷ್ಟು ಜಾಗವನ್ನು ಆರ್‌ಎಸ್‌ಎಸ್ ಹಾಗೂ ಅಂಗ ಸಂಸ್ಥೆಗಳಿಗೆ ಕೊಟ್ಟಿದೆ? ಪಟ್ಟಿ ಮಾಡಿ ಹೇಳಲಿ ನೋಡೋಣ. ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗಲೂ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಅಂಗ ಸಂಸ್ಥೆಗಳಿಗೆ ಸಾಕಷ್ಟು ಜಮೀನು ನೀಡಿದೆ. ನಾವು ಅವರಂತೆ ಕೆಲಸ ಮಾಡಿಲ್ಲ. ಕೇಂದ್ರ ಸರ್ಕಾರ ಹಾಗೂ ರಾಜ್ಯದಲ್ಲಿನ ಹಿಂದಿನ ಬಿಜೆಪಿ ಸರ್ಕಾರ ಅಂಗ ಸಂಸ್ಥೆಗಳಿಗೆ ಭೂಮಿ ಕೊಟ್ಟಿದ್ದರ ಬಗ್ಗೆ ಧ್ವನಿ ಎತ್ತುತ್ತಿದ್ದೇವೆ ಎಂದು ಹೇಳಿದರು.

ಸರಕಾರಿ ವೈದ್ಯರ ನಿವೃತ್ತಿ ವಯಸ್ಸು 65 ಕ್ಕೆ ಹೆಚ್ಚಿಸುವ ಚಿಂತನೆವಿದೆ. ಆದರೆ ಎಲ್ಲಾ ವೈದ್ಯರಿಗಲ್ಲ. ಸೂಪರ್ ಸ್ಪೆಷಲಿಸ್ಟ್ ಗಳಿಗೆ ಮಾತ್ರ ಹೆಚ್ಚಿಸುವ ಬಗ್ಗೆ ಉದ್ದೇಶ ಹೊಂದಲಾಗಿದೆ. ಮೂರು ದಿನಗಳ ಹಿಂದೆ ಬೆಂಗಳೂರು ಜಯದೇವಕ್ಕೆ ಹೋಗಿದ್ದಾಗ ವೈದ್ಯರು ಮನವಿ ಮಾಡಿಕೊಂಡಿದ್ದಾರೆ. ಸೂಪರ್ ಸ್ಪೆಷಾಲಿಟಿ ವೈದ್ಯರು, ಎಂಬಿಬಿಎಸ್, ಎಂಡಿ, ಡಿಎಂ ಮಾಡಲು ಜಾಸ್ತಿ ಸಮಯ ಬೇಕಾಗುತ್ತೆ. ಹೀಗಾಗಿ ಅವರಿಗೆ ಸೇವೆಗೆ ಕಡಿಮೆ ಸಮಯ ಸಿಗುವ ಹಿನ್ನೆಲೆಯಲ್ಲಿ ಅವರ ಸೇವಾವಧಿ ಹೆಚ್ಚಿನ ಮಾಡುವ ಆಲೋಚನೆಯಿದೆ. ಸಿಎಂ ಜತೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಚಿವರು ವಿವರಣೆ ನೀಡಿದರು.

ಕಾಪು: ಅನ್ನಭಾಗ್ಯದ ಅಕ್ಕಿ ಅಕ್ರಮ ದಾಸ್ತಾನು: ಇಬ್ಬರ ಬಂಧನ – vishwanews24

Leave a Reply