ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಜನರೇಟರ್ ಕೊಡುಗೆ -Vishwanews24
ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಜನರೇಟರ್ ಕೊಡುಗೆ –Vishwanews24
ದೊಂಬಿವಿಲಿ-ಕಲ್ಯಾಣ ಮಹಾನಗರ ಪಾಲಿಕೆ ಕಾರ್ಪೊರೇಟರ್ ಮೂಲತ ಪಡು ಇರಂದಾಡಿ ಮಲ್ಲೇಶ್ ಶೆಟ್ಟಿ ಇವರು ಸುಮಾರು ೩.೫ ಲಕ್ಷ ವೆಚ್ಚದ ಜನರೇಟರ್ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಜನರೇಟರನ್ನು ಶ್ರೀ ದೇವಳದ ಆಡಳಿತ ಮಂಡಳಿ ಸದಸ್ಯರ ವಿನಂತಿಯ ಮೇರೆಗೆ ಕೊಡುಗೆಯಾಗಿ ನೀಡಿದರು.
ಜನರೇಟರ್ನ್ನು ಮಲ್ಲೇಶ್ ಶೆಟ್ಟಿ ಪತ್ನಿ ನೇಹಾ ಮಲ್ಲೇಶ್ ಶೆಟ್ಟಿ ಹಾಗೂ ಪುತ್ರ ಹರ್ಮೆಶ್ ಮಲ್ಲೇಶ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದೇವಳದ ವತಿಯಿಂದ ನೇಹಾ ಮಲ್ಲೇಶ್ ಶೆಟ್ಟಿ ಮತ್ತು ಹರ್ಮೆಶ್ ಶೆಟ್ಟಿ ಇವರನ್ನು ದೇವಳದ ಆಡಳಿತ ಮೊಕ್ತೇಸರ ರಂಗನಾಥ್ ಭಟ್ ಇವರು ಫಲಪುಷ್ಪ ದೇವರ ಪ್ರಸಾದ ನೀಡಿ ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಂಗನಾಥ್ ಭಟ್ ಕುತ್ಯಾರು, ಆಡಳಿತ ಮಂಡಳಿ ಸದಸ್ಯರುಗಳಾದ ಜಯಕೃಷ್ಣ ಆಳ್ವ, ದಿವಾಕರ ಬಿ ಶೆಟ್ಟಿ, ರಾಘವೇಂದ್ರ ಭಟ್, ವಸಂತ ಶೆಟ್ಟಿ ಕಳತ್ತೂರು, ಪಡುಇರಂದಾಡಿ ಮನೆತನದ ಧಾರ್ಮಿಕ ವ್ಯವಸ್ಥಾಪಕ ಕುಮಾರ್ ಶೆಟ್ಟಿ, ಸುಧೀರ್ ಶೆಟ್ಟಿ ಮುಂಬೈ, ಗ್ರಾಮಸ್ಥರಾದ ಶಿವರಾಮ ಶೆಟ್ಟಿ, ಅರುಣಾಕರ ಶೆಟ್ಟಿ, ದಿವಾಕರ ಡಿ ಶೆಟ್ಟಿ, ಮೊಹಮ್ಮದ್ ಫಾರೂಕ್ ಚಂದ್ರನಗರ, ನಾರಾಯಣ ಶೆಟ್ಟಿ ವಳದೂರು, ಅರ್ಚಕರಾದ ಯಾಧವ ತಂತ್ರಿ, ಪ್ರಬಂಧಕ ಕೃಷ್ಣಮೂರ್ತಿ ಭಟ್ ಗ್ರಾಮಸ್ಥರು ಉಪಸ್ಥಿತರಿದ್ದರು.
