ಕಾಂತಾರ ಸಿನಿಮಾ ಶೈಲಿಯಲ್ಲಿ ತಮ್ಮಆಟೋವನ್ನ ಸಿಂಗರಿಸಿ , ತುಳುನಾಡಿನ ಕಂಬಳ, ಕಾಡು ಮತ್ತು ಜನರ ನಡುವಿನ ಸಂಬಂಧದ ಬಗ್ಗೆ ಮಾಹಿತಿ ನೀಡಲು ಮುಂದಾದ ಕಟಪಾಡಿಯ ಜಯಕರ್  – Vishwanews24

Featured, ಉಡುಪಿ

ಕಾಂತಾರ ಸಿನಿಮಾ ಶೈಲಿಯಲ್ಲಿ ತಮ್ಮಆಟೋವನ್ನ ಸಿಂಗರಿಸಿ , ತುಳುನಾಡಿನ ಕಂಬಳ, ಕಾಡು ಮತ್ತು ಜನರ ನಡುವಿನ ಸಂಬಂಧದ ಬಗ್ಗೆ ಮಾಹಿತಿ ನೀಡಲು ಮುಂದಾದ ಕಟಪಾಡಿಯ ಜಯಕರ್ 

ಕಟಪಾಡಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಾಹನಳನ್ನು ಸಿಂಗರಿಸಿ, ಪೂಜೆ ಮಾಡುವುದು ವಾಡಿಕೆ. ಆಂತೆಯೇ ಇದೀಗ ಜಿಲ್ಲೆಯ ಕಟಪಾಡಿಯ ಜಯಕರ್ ಎಂಬ ಆಟೋ ಚಾಲಕರೊಬ್ಬರು ಕಾಂತಾರ ಸಿನಿಮಾ ಶೈಲಿಯಲ್ಲಿ ತಮ್ಮ ಆಟೋವನ್ನು ಸಿಂಗರಿಸಿದ್ದಾರೆ. ಈ ಮೂಲಕ ತುಳುನಾಡಿನ ಕಂಬಳ, ಕಾಡು ಮತ್ತು ಜನರ ನಡುವಿನ ಸಂಬಂಧದ ಬಗ್ಗೆ ಮಾಹಿತಿ ನೀಡಲು ಮುಂದಾಗಿದ್ದಾರೆ.

ಕಳೆದ 17 ವರ್ಷಗಳಿಂದ ರಿಕ್ಷಾ ಚಾಲಕನಾಗಿ ದುಡಿದು ತನ್ನ ಜೀವನ ಸಾಗಿಸುತ್ತಿರುವ ಜಯಕರ್, 10 ವರ್ಷಗಳಿಂದ ತನ್ನ ರಿಕ್ಷಾಕ್ಕೆ ವಿವಿಧ ರೀತಿಯಲ್ಲಿ ಸಿಂಗರಿಸಿ ದೀಪಾವಳಿಯ ಸಂದರ್ಭ ಪೂಜೆ ಮಾಡುತ್ತಾ ಬರುತ್ತಿದ್ದಾರೆ. ಕರೊನಾ ಸಂದರ್ಭದಲ್ಲಿ ಬೆಲೂನ್ ಮೂಲಕ ಸಿಂಗರಿಸಿ ಕಟಪಾಡಿ ಪರಿಸರದಲ್ಲಿ ಓಡಾಟ ಮಾಡಿದ್ದರು.

ಈ ಬಾರಿ ರಿಕ್ಷಾವನ್ನು ವಿವಿಧ ಹೂ ಮತ್ತು ಬಳ್ಳಿಗಳಿಂದ ಅಲಂಕರಿಸಿ ಪ್ರಕೃತಿ ಉಳಿಸುವ ಅನಿವಾರ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಕಂಚಿನಡ್ಕದಲ್ಲಿ ಪ್ರಪ್ರಥಮ ಬಾರಿಗೆ ಸಾಮೂಹಿಕ ಗೋಪೂಜೆ, ಗೌರವಾರ್ಪಣೆ – Vishwanews24

Leave a Reply