ಕಾಪುವಿನ ಜನಸಂಕಲ್ಪ ಸಮಾವೇಶ : ಉಸ್ತುವಾರಿ ಸಚಿವ ಎಸ್ ಅಂಗಾರ ಪತ್ರಿಕಾಗೋಷ್ಟಿ: vishwanews24

Featured, ಉಡುಪಿ

ಕಾಪುವಿನ ಜನಸಂಕಲ್ಪ ಸಮಾವೇಶ : ಉಸ್ತುವಾರಿ ಸಚಿವ ಎಸ್ ಅಂಗಾರ ಪತ್ರಿಕಾಗೋಷ್ಟಿ

ಉಡುಪಿ-ಕಾರ್ಕಳ-ಕಾಪು ಭಾಗದಿಂದ ಒಟ್ಟು 10 ಸಾವಿರ ಮಂದಿ ಸೇರುವ ನಿರೀಕ್ಷೆ

ಪತ್ರಿಕಾಗೋಷ್ಟಿಯಲ್ಲಿ ಶ್ರೀಕಾಂತ್ ನಾಯಕ್. ಶಿಲ್ಪಾ ಜಿ ಸುವರ್ಣ,ಗಂಗಾಧರ ಸುವರ್ಣ ಇತರರು ಉಪಸ್ಥಿತಿ

ಕಾಪು: ನವೆಂಬರ್ 7 ರಂದು ಕಾಪುವಿನಲ್ಲಿ ನಡೆಯುವ ಜನ ಸಂಕಲ್ಪ ಸಮಾವೇಶ ಪೂರ್ವಭಾವಿಯಾಗಿ ಇಂದು ನಗರದ ಖಾಸಗಿ ಹೋಟೆಲ್‍ನಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ ” ನವೆಂಬರ್ 7 ರಂದು ನಡೆಯುವ ಜನ ಸಂಕಲ್ಪ ಸಮಾವೇಶ ಮುಂದಿನ ವಿಧಾನ ಸಭಾ ಚುನಾವಣೆಗೆ ಅಡಿಗಲ್ಲಾಗಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಿಧ ಜನಪರ ಯೋಜನೆಗಳನ್ನು ನೇರವಾಗಿ ಜನರಿಗೆ ಮುಟ್ಟಿಸುವ ದೃಷ್ಟಿಯಿಂದ ಆಯೋಜಿಸಲಾಗಿದೆ,ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ,ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ ಸೇರಿದಂತೆ ರಾಜ್ಯದ ಪ್ರಮುಖರು ಭಾಗವಹಿಸಲಿದ್ದು 10 ಸಾವಿರ ಮಂದಿ ಫಲಾನುಭವಿಗಳು ಮತ್ತು ಕಾರ್ಯಕರ್ತರು ಸಮಾವೇಶದಲ್ಲಿ ಸೇರುವ ನಿರೀಕ್ಷೆಯಿದೆಂದು ಅವರು ತಿಳಿಸಿದರು. ಕಾರ್ಕಳ-ಉಡುಪಿ ನಗರ-ಭಾಗದಿಂದ ಕೂಡ ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್,ಪ್ರಮುಖರಾದ ಗಂಗಾಧರ ಸುವರ್ಣ,ಶಿಲ್ಪಾ ಜಿ ಸುವರ್ಣ,ಗೋಪಾಲಕೃಷ್ಣ ರಾವ್,ಮೊದಲಾದವರು ಉಪಸ್ಥಿತರಿದ್ದರು.

Leave a Reply