ಕಾಪು ಅಂಗಡಿ ಮಾಲಕನಿಂದ ಆರು ಲಕ್ಷ ದೋಚಿದ್ದ ಖದೀಮ ಪೊಲೀಸ್ ಬಲೆಗೆ:vishwanews24
ಕಾಪು ಆರು ಲಕ್ಷ ದೋಚಿದ್ದ
ಖದೀಮ ಪೊಲೀಸ್
ಬಲೆಗೆ:vishwanews24
ಕಾಪು: ಗ್ರಾಹಕನ ಸೋಗಿನಲ್ಲಿ ಬಂದು ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದ ಕಾಪುವಿನ ಮಾಲಕನಿಂದ ಆರು ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದ ಖದೀಮರಿಗೆ ಬಲೆ ಬೀಸಿ ಬಂಧಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕಾಪು ಮಹಾಲಸಾ ಸ್ಟೋರ್ ಮಾಲಕ ರಾಘವೇಂದ್ರ ಕಿಣಿ ಹಣ ಕಳೆದುಕೊಂಡವರಾಗಿದ್ದು, ಕಾಪು ಪೊಲೀಸ್ ಠಾಣೆಗೆ ಹಣ ಕಳೆದುಕೊಂಡ ಬಗ್ಗೆ ದೂರು ನೀಡಿದ್ದರು.
ಕೂಡಲೇ ಕಾರ್ಯಚರಣೆಗಿಳಿದ ಕಾಪುವಿನ ಪೊಲೀಸರ ತಂಡ ಪ್ರಮುಖ ಒಂದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಇಂದು ಬೆಳಗ್ಗೆ ಆರೋಪಿಯನ್ನು ಅಂಗಡಿಗೆ ಕರೆತಂದು ಮಹಜಾರು ನಡೆಸಿದ್ದಾರೆ.

