ಕಾಪು : ಅಂಚೆ ಮೆಲ್ವೀಚಾರಕ ವಾಸುದೇವ ತೊಟ್ಟಂ ಇವರಿಗೆ ಸನ್ಮಾನ – Vishwanews24
ಕಾಪು : ಅಂಚೆ ಮೆಲ್ವೀಚಾರಕ ವಾಸುದೇವ ತೊಟ್ಟಂ ಇವರಿಗೆ ಸನ್ಮಾನ – Vishwanews24
ಕಾಪು : ಅಂಚೆ ಕಛೇರಿ ಉಡುಪಿ ದಕ್ಷಿಣ ವಿಭಾಗ ಅಂಚೆ ಮೇಲ್ವೀಚಾರಕರಾದ ವಾಸುದೇವ ತೊಟ್ಟಂ ಇವರನ್ನು ಕಾಪು ಪರಿಸರದ ಸುಮಾರು ೪೦ ಕ್ಕೂ ಮಿಕ್ಕಿ ಅಂಚೆ ಕಛೇರಿಯ ಅಂಚೆ ಪಾಲಕರು ಸಹಾಯಕ ಅಂಚೆ ಪಾಲಕರು, ಡಾಕ್ ಸೇವಕರ ನೇತೃತ್ವದಲ್ಲಿ ಕಾಪು ಮಂದಾರ ಹೋಟೆಲಿನ ಸಭಾಂಗಣದಲ್ಲಿ ಉಡುಪಿ ವಿಭಾಗ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ಇವರ ಅಧ್ಯಕ್ಷತೆಯಲ್ಲಿ ಸನ್ಮಾನ ಸಮಾರಂಭ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನವೀನ್ ಚಂದರ್, ವಾಸುದೇವ ತೊಟ್ಟಂ ತನ್ನ ೪೫ ವರುಷ ಸೇವಾವಧಿಯಲ್ಲಿ ಇಲಾಖೆಯಲ್ಲಿ ಉತ್ತಮ ಕರ್ತವ್ಯ ನೀಡಿದಲ್ಲಿ ಅವರ ಸೇವೆಯ ಫಲವಾಗಿ ಇಂದು ದಕ್ಷಿಣ ಕನ್ನಡ ಉಪವಿಭಾಗ ಅಂಚೆ ಪಾಲಕರು ಇನ್ನಿತರ ನೌಕರರು ಸೇರಿ ಕೊಂಡು ಅದ್ದೂರಿಯಾಗಿ ಸನ್ಮಾನ ಮಾಡುವುದು ಅವರ ಸೇವೆಯನ್ನು ಗುರುತಿಸಿದ್ದಿರಿ ನಿಜವಾಗಿ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಅಂಚೆ ಕೇಂದ್ರ ಕಚೇರಿಯ ಸಹಾಯಕ ಅಂಚೆ ಅಧೀಕ್ಷಕರಾದ ಜಯರಾಮ ಶೆಟ್ಟಿ ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ ವಿಠಲ ಭಟ್, ಮಂಗಳೂರು ಅಂಚೆ ವಿಭಾಗ ಕೇಂದ್ರ ಕಚೇರಿಯ ಸಹಾಯಕ ಅಧೀಕ್ಷಕರಾದ ಶ್ರೀನಾಥ, ಪುತ್ತೂರು ಅಂಚೆ ವಿಭಾಗ ಕೇಂದ್ರ ಸಹಾಯಕ ಅಧೀಕ್ಷಕರಾದ ಮೋಹನ್ ಶೆಟ್ಟಿ ,ಕಾಪು ಅಂಚೆ ಪಾಲಕ ಕೃಷ್ಣಪ್ಪ ಕರ್ಯಕ್ರಮದ ಮುಖ್ಯ ಸಂಘಟಕ ಕಳತ್ತೂರು ದಿವಾಕರ.ಬಿ.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕರ್ಯಕ್ರಮದ ಉಸ್ತುವಾರಿ ಎಲ್ಲೂರು ಅಂಚೆ ಪಾಲಕ ವಾಣಿ.ಎಸ್.ರಾವ್ ಸ್ವಾಗತಿಸಿದರು. ಉಡುಪಿ ದಕ್ಷಿಣ ವಿಭಾಗ ಅಂಚೆ ಮೇಲ್ವಿಚಕರಾದ ಜನಾರ್ಧನ್ ಕಿಯೋದಿಕ್ಸ್ ಮೆಂಡೊನ್ಸ ಉದ್ಯಾವರ, ಸುಭಾಶ್ ತಿಂಗಳಾಯ, ಕಿಟ್ಟು ಕುಮಾರ್, ಸನ್ಮಾನಿತರ ಬಗ್ಗೆ ಗುಣಗಾನ ಮಾಡಿದರು.ಉಡುಪಿ ಅಂಚೆ ವಿಭಾಗದ ಸುರೇಶ ಕರ್ಯಕ್ರಮ ನಿರ್ವಹಿಸಿ ಪಿತ್ರೋಡಿ ಅಂಚೆ ಪಾಲಕ ಕೃಷ್ಣಪ್ಪ ಧನ್ಯವಾದ ವಿತ್ತರು.
