ಕಾಪು ಕಾಂಗ್ರೆಸ್ ಅಲ್ಪ ಅಸಂಖ್ಯಾತ ಘಟಕ: ಕಾಪು ಮಲ್ಲಾರಿನ ನಿರಾಶ್ರಿತರ ವೃದಾಶ್ರಮಕ್ಕೆ ಆಹಾರ ವಿತರಣೆ.vishwanews24
ಕಾಪು ಕಾಂಗ್ರೆಸ್ ಅಲ್ಪ ಅಸಂಖ್ಯಾತ ಘಟಕ: ಕಾಪು ಮಲ್ಲಾರಿನ ನಿರಾಶ್ರಿತರ ವೃದಾಶ್ರಮಕ್ಕೆ ಆಹಾರ ವಿತರಣೆ.vishwanews24
ಕಾಪು: ದಿನಾಂಕ 09.06.2021 ಕಾಂಗ್ರೆಸ್ ಪಕ್ಷದ ರಾಜ್ಯಾದಕ್ಷರಾದ ಡಿ ಕೆ ಶಿವಕುಮಾರ್ ಹಾಗು ಅಲ್ಪ ಅಸಂಖ್ಯಾತ ಘಟಕದ ರಾಜ್ಯಾದಕ್ಷರಾದ ವೈ ಸೈಯದ್ ಅಹ್ಮದ್ ಅವರ ಆದೇಶ ದ ಮೇರೆಗೆ ಮತ್ತು ಮಾಜಿ ಸಚಿವ ರಾದ ವಿನಯ ಕುಮಾರ ಸೊರಕೆ ಯವರ ಮಾರ್ಗದರ್ಶನದಲ್ಲಿ ರಾಜ್ಯದಾದ್ಯಂತ ನಡೆಯುವ ಕಾರ್ಯಕ್ರಮದ ಅಂಗವಾಗಿ ಇಂದು ರಾಜ್ಯ ಅಲ್ಪ ಅಸಂಖ್ಯಾತ ಘಟಕ ಹಾಗು ಕಾಪು ಕಾಂಗ್ರೆಸ್ ಅಲ್ಪ ಅಸಂಖ್ಯಾತ ಘಟಕದ ಜಂಟಿ ಸಂಯೊಗದೊಂದಿಗೆ ಕಾಪು ಮಲ್ಲಾರಿನ ನಿರಾಶ್ರಿತರ ವೃದಾಶ್ರಮಕ್ಕೆ ಆಹಾರವನ್ನು ವಿತರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕೊರೋಣ ಸಂದರ್ಭದಲ್ಲಿ ಕಾಪು ಕಾಂಗ್ರೆಸ್ ಅಲ್ಪ ಅಸಂಖ್ಯಾತ ಘಟಕದ ಅಧ್ಯಕ್ಷ ಶರ್ಪುದೀನ್ ಶೇಖ್ ಮಾತನಾಡಿ” ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಎಲ್ಲಾ ಕಡೆ ಗಳಲ್ಲಿ ವಿವಿಧ ರೀತಿಯ ಎಲ್ಲಾ ವರ್ಗದ ಜನರಿಗೆ ಸಹಕಾರ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರ ಸೇವೆ ಮಾಡುವುದಾಗಿ ಅವರು ಹೇಳಿದರು.
ರಾಜ್ಯಅಲ್ಪ ಅಸಂಖ್ಯಾತ ಘಟಕದ ಸಂಯೋಜಕರಾದ ಫಾರುಕ್ ಚಂದ್ರನಗರ ಮಾತನಾಡಿ ಕಾಪು ಸಮಾಜ ಸೇವೆ ವತಿಯಿಂದ 300 ಹೆಚ್ಚು ಅಶಕ್ತರ ಕುಟುಂಬ ಕ್ಕೆ ಅಕ್ಕಿ ಹಾಗು ಜಿನಸು ಪಡಿತರ ಕಿಟ್ ವಿತರಣೆ ಮಾಡಿದ್ದು ಇನ್ನೂ ಮುಂದೆಯೂ ಸಹ ದಾನಿಗಳ ಸಹಯೋಗ ದೊಂದಿಗೆ ಮುಂದುವರೆಸುವ ಹಂಬಲ ಇದೆ ಎಂದರು.
ಈ ಸಂದರ್ಭದಲ್ಲಿ ಕಾಪು ಕಾಂಗ್ರೆಸ್ ನಗರ ಕಾಂಗ್ರೆಸ್ ಅಧ್ಯಕ್ಷ ರಾದ ಸಾದಿಕ್ ದಿನಾರ್,ಮಜೂರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರಾದ ನಾಗಭೂಷಣ ರಾವ್,ಮಜೂರು ಗ್ರಾಮ ಪಂಚಾಯಿತ ಸದಸ್ಯರಾದ ವಿಜಯ ದೀರಜ್,ಶಿರ್ವ ಗ್ರಾಮ ಪಂಚಾಯಿತ ಸದಸ್ಯರಾದಜಸೀಂತ ಡಿಸೋಜ,ಕಾಂಗ್ರೆಸ್ ಮುಖಂಡರಾದ ಲ್ಯಾಂಸಿ ಕೋರ್ಡ.ಅಬ್ದುಲ್ ಇಲಿಯಾಸ್ ಹಾಗು ಪ್ರವೀಣ್ ಹಾಜರಿದ್ದರು..
