ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಲಾಲಜಿ ಆರ್ ಮೆಂಡನ್ ಎಪ್ರಿಲ್ 23 ರಂದು ನಾಮ ಪತ್ರ ಸಲ್ಲಿಕೆ.

Featured, ಉಡುಪಿ

ಕಾಪು : ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಲಾಲಜಿ ಆರ್ ಮೆಂಡನ್ ಎಪ್ರಿಲ್ 23 ರಂದು ಬೆಳಗ್ಗೆ 11 ಗಂಟೆಗೆ ಕಾಪುವಿನಿಂದ ಹೊರಟು ಉಡುಪಿಯಲ್ಲಿ ನಾಮ‌ಪತ್ರ ಸಲ್ಲಿಸಲಿದ್ದಾರೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ಕಾಪು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರಾಜ್ಯದ ಆಡಳಿತ ವೈಫಲ್ಯ, ಹಿಂದೂ ಸಂಘಟನೆ ಕಾರ್ಯ ಕರ್ತರ ಕೊಲೆ, ಸರ್ಕಾರಿ ಅಧಿಕಾರಿಗಳ ಮೇಲೆ ನಿರಂತರ ದೌರ್ಜನ್ಯ ನಿಲ್ಲಬೇಕಾದರೆ ಭಾರತೀಯ ಜನಾತ ಪಾರ್ಟಿ ಅಧಿಕಾರ ಹಿಡಿಯಬೇಕು ಎಂದರು.

ರಸ್ತೆ, ನೀರು, ಕೆರೆಗಳ ಅಭಿವೃದ್ಧಿ ನಮ್ಮ‌ ಅಜೆಂಡಾ ಅಲ್ಲ.

ಕಾಪುವಿನಲ್ಲಿ ಮತಯಾಚನೆಗೆ ಬಿಜೆಪಿ ಯ ಅಜೆಂಡಾ ಯಾವುದೆಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕುಯಿಲಾಡಿ ಕೇವಲ ರಸ್ತೆ, ನೀರು,ಕೆರೆಗಳ ಅಭಿವೃದ್ಧಿ ಅಜೆಂಡಾ ಅಲ್ಲಾ ಈ ಭಾರಿ ಏನಿದ್ದರೂ ಬಿಜೆಪಿ ಪಕ್ಷ ಮತ್ತು ಚಿಹ್ನೆ ಅಜೆಂಡಾ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ವಕ್ತಾರ ಶಂಕರ ಪೂಜಾರಿ, ಯಶ್ಪಾಲ್ ಸುವರ್ಣ, ಮತ್ತು ಶಿಲ್ಲಾ ಜಿ.ಸುವರ್ಣ, ಮುರಳಿಧರ ಪೈ, ಉಪಸ್ಥಿತಿತರಿದ್ದರು.