ಕಾಪು -ಚಂದ್ರ ನಗರ ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ ಒರ್ವ ಬಂಧನ- ಮೂವರು ಪರಾರಿ: Vishwanews24
ಕಾಪು- ಚಂದ್ರ ನಗರ ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ ಒರ್ವ ಬಂಧನ- ಮೂವರು ಪರಾರಿ: Vishwanews24
ಶಿರ್ವ: ಪೊಲೀಸರ ಖಚಿತ ಮಾಹಿತಿ ಆಧಾರದ ಮೇರೆಗೆ ಆದಿತ್ಯವಾರ ಬೆಳಗ್ಗೆ ಒಂದು ಮೂವತ್ತರ ಸುಮಾರಿಗೆ ಚಂದ್ರ ನಗರದ ಅಬೂಬಕ್ಕರ್ ಎಂಬವರ ಮನೆಯಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಕಡಿದು ತಯಾರಿಸುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಶಿರ್ವ ಎಸೈ ರಾಘವೇಂದ್ರ ಸಿ ಮತ್ತು ಅವರ ತಂಡ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದರು ಎಂಬ ಮಾಹಿತಿ ಲಭ್ಯವಾಗಿವೆ.
ಈ ಸಂದರ್ಭದಲ್ಲಿ ಪೋಲೀಸರನ್ನು ಕಂಡು ಆರೋಪಿಗಳು ಓಡಿಹೋಗಿದ್ದು ಅವರನ್ನು ಬೆನ್ನಟ್ಟಿ ಒರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.
ಬಂಧಿಸಿದ ಆರೋಪಿಯನ್ನು ಸಂಶುದ್ದೀನ್ ಪ್ರಾಯ (53) ಎಂದು ಎನ್ನಲಾಗುತ್ತಿದ್ದು ಉಳಿದ ಮೂವರು ಕಳತ್ತೂರು ಪೈಯ್ಯಾರು ನಿವಾಸಿ ನಜೀರ್ರನ ಮಗ ಆಶೀರ್, ಉಮ್ಮರಬ್ಬನ ಮಗ ಆಶ್ರಫ್,ಚಂದ್ರನಗರದ ಅಬೂಬಕ್ಕರ್ ಪರಾರಿಯಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಘಟನಾ ಸ್ಥಳದಿಂದ ಮಾಂಸ ಮಾಡಲು ಉಪಯೋಗಿಸುತ್ತಿದ್ದ ಪರಿಕರಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಒಂದೇ ವಾರದಲ್ಲಿ ಪದೇ ಪದೇ ಮರುಕಳಿಸುವ ಪ್ರಕರಣಗಳು
ಪಡುಬಿದ್ರೆ ಠಾಣೆ ವ್ಯಾಪ್ತಿಯ ಉಚ್ಚಿಲ ಎಂಬಲ್ಲಿ ಕಳೆದ ವಾರ ಅಕ್ರಮ ಕಸಾಯಿಖಾನೆ ಮೇಲೆ ದಾಳಿ ನಡೆಸಿದ್ದರು.

