ಕಾಪು ಪೊಲೀಸ್ ಠಾಣೆ ERSS ತುರ್ತು ವಾಹನ‌ ಜಾಗೃತಿ ಜಾಥ.-vishwanews24

Featured, ಉಡುಪಿ

ಕಾಪು ಪೊಲೀಸ್ ಠಾಣೆ ERSS ತುರ್ತು ವಾಹನ‌ ಜಾಗೃತಿ ಜಾಥ

ಕಾಪು : ಒಂದು ಭಾರತ ಒಂದು ತುರ್ತುಕರೆ ಸಂಖ್ಯೆ ಪರಿಕಲ್ಪನೆಯಡಿ ಕರ್ನಾಟಕದಲ್ಲಿ 112 ಸಹಾಯವಾಣಿಯನ್ನು ಆರಂಭಿಸಲಾಗಿದೆ. 112 ಗೆ ಕರೆ ಮಾಡಿದರೆ ನೇರವಾಗಿ ಜಿಲ್ಲಾ ಸಮನ್ವಯ ಕೇಂದ್ರದೊಂದಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಪೊಲೀಸ್, ಅಗ್ನಿಶಾಮಕ, ಮತ್ತು ಆರೋಗ್ಯ ಮುಂತಾದ ಸೇವೆ ಪಡೆಯಬಹುದು. ERSS ವೆಬ್ ಸೈಟ್ ಗೆ ಭೇಟಿ ನೀಡಿ E mailಮೂಲಕ ದೂರನ್ನು ದಾಖಲಿಸಬಹುದು ಎಂಬುದರ ಕುರಿತಾದ ಜಾಗೃತಿ ಜಾಥ ಕಾಪು‌ ಪೋಲಿಸ್ ಠಾಣೆಯ ವತಿಯಿಂದ ಆದಿತ್ಯವಾರ ನಡೆಯಿತು.
ಕರೆ ಮಾಡುವುದು ಹೇಗೆ
ಸಾಮಾನ್ಯ ಫೋನ್ ನಿಂದ 112 ಡಯಲ್ ಮಾಡಬೇಕು. ಸಾಮಾನ್ಯ ಫೋನ್ ಗಳಲ್ಲಿ 5 ಅಥವಾ 9 ಬಟನ್ ದೀರ್ಘವಾಗಿ ಒತ್ತಿದರೆ ಕರೆ ಸಕ್ರಿಯವಾಗುತ್ತದೆ. ಸ್ಮಾರ್ಟ್ ಫೋನ್ ಮೂಲಕ 112 ಸಂಖ್ಯೆಗೆ ಕರೆ ಪೊಲೀಸ್ಮಾಡಬಹುದು. ಅಥವಾ ಪವರ್ ಬಟನ್ ಮೂರು ಬಾರಿ ಒತ್ತಿದರೆ ತಕ್ಷಣ ERSS ಸಕ್ರಿಯವಾಗುತ್ತದೆ. ನಾಗರಿಕರಿಗೆ 24×7 ತುರ್ತು ಪ್ರಕ್ರಿಯೆ, ಬೆಂಬಲ ಸೇವೆಗಳು, ಸೇವಾ ವಿನಂತಿದಾರರ ಸ್ವಯಂ ಚಾಲಿತ ಸ್ಥಳ ಗುರುತಿಸುವಿಕೆ, ತುರ್ತು ಸ್ಪಂದನ ವಾಹನಗಳು, ನೇರ ಪತ್ತೆಯ ವ್ಯವಸ್ಥೆಗೆ ಅನೂಕೂಲಗಳಾಗಿವೆ. .