ಕಾಪು ಬಿಜೆಪಿ ಯುವಮೋರ್ಚದ ವತಿಯಿಂದ ಮರಳು ಶಿಲ್ಪ ರಚಿಸಿ ವಿಜಯ ಸಂಕಲ್ಪ ಅಭಿಯಾನ : ಕಾರ್ಯಕ್ರಮದ ವಿವರ- ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ರಾ‍ಷ್ಟ್ರೀಯ – ರಾಜ್ಯ ಬಿಜೆಪಿ ನಾಯಕರು – Vishwanews24

Featured, ಉಡುಪಿ

ಕಾಪು ಬಿಜೆಪಿ ಯುವಮೋರ್ಚದ ವತಿಯಿಂದ ಮರಳು ಶಿಲ್ಪ ರಚಿಸಿ ವಿಜಯ ಸಂಕಲ್ಪ ಅಭಿಯಾನ: ಕಾರ್ಯಕ್ರಮದ ವಿವರ-ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ರಾ‍ಷ್ಟ್ರೀಯ-ರಾಜ್ಯ ಬಿಜೆಪಿ ನಾಯಕರು

ಬಿಜೆಪಿ ರಾಷ್ಟ್ರೀಯ ರಾಜ್ಯ ನಾಯಕರ ಕಣ್ಣು ಸೆಳೆಯಿತು- ಕಾಪು ಬಿಜೆಪಿ ಯುವಮೋರ್ಚ ಕಾರ್ಯಕರ್ತರ ಕಾರ್ಯ ವೈಖರಿ

ಕಾಪು: ಭಾರತೀಯ ಜನತಾ ಪಾರ್ಟಿಯ ರಾಜ್ಯ ಮಟ್ಟದ ವಿಜಯ ಸಂಕಲ್ಪ ಅಭಿಯಾನ ಎಲ್ಲೆರೆಯು ನಡೆಯುತ್ತಿದ್ದು ಈ ಪೈಕಿ ಕಾಪು ಬಿಜೆಪಿ ಯುವಮೋರ್ಚ ವತಿಯಿಂದ ಪ್ರವಾಸಿಗರ ತಾಣವಾದ ಕಾಪು ಬೀಚ್ ದೀಪಸ್ಥಂಬ ಬಳಿ ಮರಳುಶಿಲ್ಪ ರಚಿಸಿ ಸದಸ್ಯತ್ವ ಅಭಿಯಾನವನ್ನು ರಾಜ್ಯದಲ್ಲಿಯೇ ಪ್ರಥಮವಾಗಿ ವಿಭಿನ್ನವಾಗಿ ನಡೆಸಲಾಗಿತ್ತು.

ಕಾಪು ಬಿಜೆಪಿ ಯುವಮೋರ್ಚ ಕಾರ್ಯಕರ್ತರು ಸಾವಿರಾರು ಮಂದಿ ಸೇರುವ ಕಾಪುವಿನ ಲೈಟ್ ಹೌಸ್ ಬಳಿ ಬಿಜೆಪಿ ಯುವಮೋರ್ಚ ಕಾಪು ವಲಯ ಬಿಜೆಪಿ ಸಂಕಲ್ಪ ಅಭಿಯಾನ ಎಂದು ಚಿತ್ರಿಸಿ ಕಮಲದ ಚಿತ್ರದೊಂದಿಗೆ ಸದಸ್ಯತ್ವ ಅಭಿಯಾನದ ದೂರವಾಣಿ ಸಂಖ್ಯೆ ಬರೆದು ಕಾರ್ಯಕ್ರಮ ನಡೆಸಿದ್ದರು.
ಸದ್ಯ ಈ ಪೋಟೊಗಳು ವಿಭಿನ್ನ ಆಲೋಚನೆ ಮತ್ತು ವೈಶಿಷ್ಟತೆಯನ್ನು ಉಂಟು ಮಾಡಿದ ಪರಿಣಾಮವಾಗಿ ಬಿಜೆಪಿಯ ರಾಷ್ಟೀಯ ಹಾಗೂ ರಾಜ್ಯ ನಾಯಕರ ಮನಸೆಲೆದಿದ್ದು ಅವರೆಲ್ಲರೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮುಖೇನ ಕಾರ್ಯಕರ್ತರರಿಗೆ ಭೇಷ್ ಎಂದಿದ್ದಾರೆ.

ಕಾಪು ಬಿಜೆಪಿ ಯುವಮೋರ್ಚ ವತಿಯಿಂದ ಮರಳು ಶಿಲ್ಪ ರಚಿಸಿ ವಿಜಯ ಸಂಕಲ್ಪ ಅಭಿಯಾನ – Vishwanews24

Leave a Reply