ಕಾಪು ಲಕ್ಷ್ಮಿ ಜನಾರ್ಧನ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು- ಚಿಲ್ಲರೆ ಬಿಟ್ಟು ನೋಟುಗಳನ್ನು ಕದ್ದೊಯ್ದ ಖಧೀಮರು:- ಘಟನೆ ನಡೆದು ಎಂಟು ಗಂಟೆ ಕಳೆದರೂ ದೂರು ನೀಡದ ಅಧಿಕಾರಿ ವರ್ಗ: vishwanews24

Featured, ಉಡುಪಿ

ಕಾಪು ಲಕ್ಷ್ಮಿ ಜನಾರ್ಧನ ದೇವಸ್ಥಾನಕ್ಕೆ

ನುಗ್ಗಿದ ಕಳ್ಳರು- ಚಿಲ್ಲರೆ ಬಿಟ್ಟು

ನೋಟುಗಳನ್ನು ಕದ್ದೊಯದ್ದ

ಖಧೀಮರು:- vishwanews24

ಘಟನೆ ನಡೆದು ಎಂಟು ಗಂಟೆ 

ಕಳೆದರೂ ದೂರು ನೀಡದ ಅಧಿಕಾರಿ ವರ್ಗ

ಕಾಪು: ಸಾವಿರ ಸೀಮೆಯ ಕಾಪು ಲಕ್ಷ್ಮಿ ಜನಾರ್ಧನ ದೇವಸ್ಥಾನದಲ್ಲಿ ಆದಿತ್ಯವಾರ ಬೆಳಗ್ಗೆ ಕಾಣಿಕೆ ಡಬ್ಬಿ ಕಲವು ಮಾಡಿರುವ ಪ್ರಕರಣದ ಬಗ್ಗೆ ವರದಿಯಾಗಿದೆ.


ಇಂದು ಬೆಳಗ್ಗಿನ ಜಾವ ಸುಮಾರು 3 ಗಂಟೆಯ ಹೊತ್ತಿಗೆ ದೇಗುಲದ ಉತ್ತರ ಭಾಗದ ಬೀಗ ಒಡೆದು ದೇವಸ್ಥಾನದ ಒಳಗೆ ನುಗ್ಗಿದ ಖಧೀಮರು ಕಾಣಿಕೆ ಡಬ್ಬಿಯನ್ನು ಒಡೆದು ಚಿಲ್ಲರೆ ಹಣ ಬಿಟ್ಟು ಬರೀ ನೋಟುಗಳನ್ನು ಕದ್ದೊಯ್ದ ಬಗ್ಗೆ ಬಗ್ಗೆ ಮಾಹಿತಿ ಹೊರಬಿದ್ದಿದೆ.


ಬೆಳಗ್ಗಿನ ಜಾವ ವಾಚ್ ಮ್ಯಾನ್ ನಿದ್ರೆಗೆ ಜಾರಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ ಎಚ್ಚರವಾಗುವ ಸಮಯದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ ಕೂಡಲೇ ಕಾಪು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಬೆಳಗ್ಗಿನ ಜಾವ ಈ ಘಟನೆ ನಡೆದಿದ್ದರೂ ಕೂಡ ಇದುವರೆಗೂ ಪ್ರಕರಣ ಅಥಾವ ದೂರು ದಾಖಲಾಗಿಲ್ಲ ಎಂಬ ಮಾತು ಕೂಡ ಕೇಳಿಬರುತ್ತಿದೆ.

ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳ ಬೇಜಬ್ದಾರಿತನ‌ ಎದ್ದು ಕಾಣುತ್ತಿದೆಂದು ಸಾರ್ವಜನಿಕರು ಅಸಮಧಾನ ಹೊರಹಾಕುತ್ತಿದ್ದಾರೆ.

Leave a Reply