ಕಾಪು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ ಧ್ವಜಾರೋಹಣ ಸಂಪನ್ನ, ಫೆಬ್ರವರಿ 18 ರಂದು ಮನ್ಮಹಾರಥೋತ್ಸವ.- vishwanews24

Featured, ಉಡುಪಿ

ಕಾಪು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ ಧ್ವಜಾರೋಹಣ ಸಂಪನ್ನ, ಫೆಬ್ರವರಿ 18 ರಂದು ಮನ್ಮಹಾರಥೋತ್ಸವ.

photo credit: Roopam Studio kaup

ವರದಿ: ಪುರುಷೋತ್ತಮ ಸಾಲಿಯಾನ್

ಕಾಪು: ಕಾಪು ಮಹತೋಭಾರ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಫೆ.13 ರಿಂದ 20 ರವರೆಗೆ ನಡೆಯಲಿರುವ ವಾರ್ಷಿಕ ಮಹೋತ್ಸವದ ಪ್ರಯುಕ್ತ ಗುರುವಾರ ಧ್ವಜಾರೋಹಣ ಸಂಪನ್ನಗೊಂಡಿತು.

ದೇವಳದ ತಂತ್ರಿಗಳಾದ ವೇದಮೂರ್ತಿ ಶ್ರೀಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಅನುಷ್ಠಾನಗಳೊಂದಿಗೆ ಬೆಳಗ್ಗೆ 9.30ರ ಮೀನ ಲಗ್ನದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಫೆ 18 ರಂದು ಶ್ರೀ ಮನ್ಮಹಾರಥೋತ್ಸವ:

ಕ್ಷೇತ್ರದ ವರ್ಷಾವಧಿ ಮಹೋತ್ಸವದ ಪ್ರಯುಕ್ತ ಫೆ.18ರಂದು ಶ್ರೀ ಮನ್ಮಹಾರಥೋತ್ಸವ ಸಂಪನ್ನಗೊಳ್ಳಲಿದೆ.
ನಾನಾ ಧಾರ್ಮಿಕ ಅನುಷ್ಠಾನಗಳೊಂದಿಗೆ ಆ ದಿನ ಬೆಳಗ್ಗೆ 10.45 ರ ಮೇಷ ಲಗ್ನದಲ್ಲಿ ರಥಾವರೋಹಣ ನಡೆಯಲಿದ್ದು, ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಜರುಗಲಿದೆ. ರಾತ್ರಿ 8 ಗಂಟೆಗೆ ಶ್ರೀ ಮನ್ಮಹಾರಥೋತ್ಸವ ಬಳಿಕ, ಉತ್ಸವ ಬಲಿ, ಕಟ್ಟೆ ಪೂಜೆ, ಭೂತ ಬಲಿ, ಶಯನ ಸಹಿತ ಧಾರ್ಮಿಕ ಅನುಷ್ಠಾನಗಳೊಂದಿಗೆ ವರ್ಷಾವಧಿ ಉತ್ಸವ ಸಂಪನ್ನಗೊಳ್ಳಲಿದೆ.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್‌ ಎಂ ಬಂಗೇರ, ಕಾರ್ಯನಿರ್ವಹಣಾಧಿಕಾರಿ ರವಿಶಂಕರ್‌ ಕೆ., ಪ್ರಮುಖರಾದ ಕೆ.ಪಿ.ಆಚಾರ್ಯ, ಕೆ.ವಾಸುದೇವ ಶೆಟ್ಟಿ, ನಡಿಕೆರೆ ರತ್ನಾಕರ್‌ ಶೆಟ್ಟಿ, ರಮೇಶ್‌ ಹೆಗ್ಡೆ ಕಲ್ಯ, ಯೋಗೀಶ್‌ ವಿ. ಶೆಟ್ಟಿ, ದಿವಾಕರ ಶೆಟ್ಟಿ ಕಾಪು, ಲಕ್ಷ್ಮೀಶ್‌ ತಂತ್ರಿ ಮಾಳವಿಕಾ, ರತ್ನಾಕರ ಹೆಗ್ಡೆ ಕಲಿಲಬೀಡು, ಶ್ರೀಧರ ಶೆಣೈ, , ಲಕ್ಷ್ಮೀಕಾಂತ್‌ ಕೆ. ಆಡಳಿತ ಮಂಡಳಿಯ ಸದಸ್ಯರಾದ ನಾರಾಯಣ ತಂತ್ರಿ, ಸರೋಜಿನಿ ಜೆ ಶೆಟ್ಟಿ, ದೇವರಾಜ್‌ ಪಡು, ಉಮೇಶ್‌ ಪೂಜಾರಿ, ರಮಾ ವೈ. ಶೆಟ್ಟಿ, ಎಂ. ಕುಟ್ಟಿ ದೇವಸ್ಥಾನದ ಸಿಬಂದಿ ಮತ್ತು ಕಾಪು ಸೀಮೆಯ ಹತ್ತು ಸಮಸ್ತರು ಉಪಸ್ಥಿತರಿದ್ದರು.