ಕಾಪು : ಸಹಕಾರ ಭಾರತಿ ಕಾಪು ತಾಲೂಕು- ಸಹಕಾರ ಭಾರತಿ ಸ್ಥಾಪನಾ ದಿನಾಚರಣೆ : vishwanews24

Featured, ಉಡುಪಿ

ಕಾಪು : ಸಹಕಾರ ಭಾರತಿ ಕಾಪು ತಾಲೂಕು- ಸಹಕಾರ ಭಾರತಿ ಸ್ಥಾಪನಾ ದಿನಾಚರಣೆ : vishwanews24

ಕಾಪು: (ವಿಶ್ವ ನ್ಯೂಸ್24) ಸಹಕಾರ ಭಾರತಿ ಕಾಪು ತಾಲೂಕಿನ ವತಿಯಿಂದ ಸಹಕಾರ ಭಾರತಿ ಸ್ಥಾಪನ ದಿನಾಚರಣೆಯು ಬುಧವಾರ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.

ಬೋಳ ಸದಾಶಿವ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ” ಮುಂದಿನ ದಿನಗಳಲ್ಲಿ ಕಾಪು ತಾಲೂಕಿನಲ್ಲಿ ಎಲ್ಲಾ ಸಹಕಾರಿ ಸಂಘದಲ್ಲಿ ಸಹಕಾರ ಭಾರತೀಯ ನಿರ್ದೇಶಕರು ಇರಬೇಕು ಆ ನಿಟ್ಟಿನಲ್ಲಿ ಕಟಿಬದ್ದರಾಗಿ ಕಾರ್ಯನಿರ್ವಹಿಸಬೇಕು ಅದರ ಮುಖೇನ ಭ್ರಷ್ಟಾಚಾರ ರಹಿತ ಆಡಳಿತ ಆಧುನೀಕರಣದ ಹೆಜ್ಜೆಯನ್ನು ಇಡಬೇಕೆಂದರು”

ಕೃಷಿಪತ್ತಿನ ಸಹಕಾರಿ ಸಂಘಗಳು ಕೃಷಿಕರಿಗೆ ಸವಲತ್ತು ನೀಡುವಲ್ಲಿ ವಿಫಲ-ಉಳ್ಳವರಿಗೆ ಡಿವಿಡೆಂಟ್ ನೀಡುವಲ್ಲಿ ಸಫಲ: ಕುತ್ಯಾರ್ ಪ್ರಸಾದ್ ಶೆಟ್ಟಿ ಆರೋಪ

 

ಮೋಹನ್ ಕುಂಬ್ಲೆಕರ್ ದಿಕ್ಸೂಚಿ ಭಾಷಣ ಮಾಡಿದರು
ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕುತ್ಯಾರ್ ಪ್ರಸಾದ್ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು.
ಕಟಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕರಾದ ವಿಠಲ್ ಜೆ ಶೇರಿಗಾರ್ ಅವರಿಗೆ ಸನ್ಮಾನ ಕಾರ್ಯಕ್ರಮ ವೇದಿಕೆಯಲ್ಲಿ ನಡೆಯಿತು.

ಲಂಡನ್‌ನಲ್ಲಿ ವಾಸವಾಗಿರುವ ವಿಜಯ್‌ ಮಲ್ಯಗೆ ಐಷಾರಾಮಿ ಬಂಗಲೆ ತೆರವುಗೊಳಿಸುವಂತೆ ಲಂಡನ್‌ ಹೈಕೋರ್ಟ್‌ ಆದೇಶ – Vishwanews24

ಕಾರ್ಯಕ್ರಮದಲ್ಲಿ ಸಾಣೂರು ನರಸಿಂಹ ಕಾಮತ್,ಮಂಜುನಾಥ ಎಸ್.ಕೆ, ಇಂದುಶೇಖರ ಸುವರ್ಣ, ಉಪಸ್ಥಿತರಿದ್ದರು.
ಸಹಕಾರ ಭಾರತಿಯ ಕಾಪು ಅಧ್ಯಕ್ಷ ಗಂಗಾಧರ ಸುವರ್ಣ ಸ್ವಾಗತಿಸಿ, ಕಾರ್ಯದರ್ಶಿ ಕೇಶವ ಮೊಯಿಲಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.

ನೆಲ್ಯಾಡಿ : ಹಲವು ಮಂದಿಯಿಂದ ಲಕ್ಷಾಂತರ ರೂ. ಸಾಲ ; ಪಿಗ್ಮಿ ಸಂಗ್ರಾಹಕ ನಾಪತ್ತೆ  – Vishwanews24

Leave a Reply