ಕಾರವಾರ ನೌಕಾನೆಲೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ -Vishwanews24
ಕಾರವಾರ ನೌಕಾನೆಲೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ -Vishwanews24
ಹೊಸದಿಲ್ಲಿ: ಕಾರವಾರ ಹಾಗೂ ಕೊಚ್ಚಿಯಲ್ಲಿರುವ ಭಾರತದ ಮುಂಚೂಣಿ ನೌಕಾ ನೆಲೆಗಳಿಗೆ ಭೇಟಿ ನೀಡುವ ಎರಡು ದಿನಗಳ ಪ್ರವಾಸವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಆರಂಭಿಸಿದ್ದಾರೆ.
ಕರ್ನಾಟಕದ ಕಾರವಾರದಲ್ಲಿರುವ ಅತ್ಯಂತ ಪ್ರಮುಖ ನೌಕಾನೆಲೆ ವಿಸ್ತರಣೆ ಮಾಡುವ ಚಟುವಟಿಕೆಯನ್ನು ಭಾರತೀಯ ನೌಕಾಪಡೆ ನಡೆಸುತ್ತಿದೆ. ಅದರ ಅಭಿವೃದ್ಧಿ ಕಾರ್ಯ ಪೂರ್ಣಗೊಂಡ ಬಳಿಕ ಏಷ್ಯಾದ ಅತಿದೊಡ್ಡ ನೌಕಾನೆಲೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಕೊಚ್ಚಿಯಲ್ಲಿ ನಡೆಯುತ್ತಿರುವ ಭಾರತದ ಮೊಟ್ಟ ಮೊದಲ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ವಾಹಕ (ಐಎಸಿ-ಐ) ವಿಕ್ರಾಂತ್ ನಿರ್ಮಾಣ ಪ್ರಗತಿಯನ್ನು ರಾಜನಾಥ್ ಸಿಂಗ್ ಪರಿಶೀಲಿಸಲಿದ್ದಾರೆ. ಈ ವಿಮಾನ ಸಾಗಾಣಿಕೆ ನೌಕೆಯು ಈ ವರ್ಷದ ಅಂತ್ಯ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ.
Leaving New Delhi on a two day visit to Karwar and Kochi. Shall review the ongoing infrastructure development at Karwar and also the progress of construction of the Indigenous Aircraft Carrier (IAC) at Kochi. Looking forward to this visit.
— Rajnath Singh (@rajnathsingh) June 24, 2021
