ಕಾರ್ಕಳ: ಆಗುಂಬೆಯಲ್ಲಿ ಭೀಕರ ಅಪಘಾತ : 4 ಮಂದಿ ದಾರುಣ ಸಾವು, ಐವರು ಗಂಭೀರ – VIshwanews24

Featured, ಉಡುಪಿ

ಕಾರ್ಕಳ: ಆಗುಂಬೆಯಲ್ಲಿ ಭೀಕರ ಅಪಘಾತ : 4 ಮಂದಿ ದಾರುಣ ಸಾವು, ಐವರು ಗಂಭೀರ – VIshwanews24

ಕಾರ್ಕಳ : ಆಗುಂಬೆ ಘಾಟಿಯಲ್ಲಿ ಭೀಕರ ಅಪಘಾತ ಸಂಭವಿಸಿ 4 ಮಂದಿ ದಾರುಣ ಸಾವನ್ನಪ್ಪಿದ ಘಟನೆ ಅ.29 ರ ಶುಕ್ರವಾರ ವರದಿಯಾಗಿದೆ.

ಆಗುಂಬೆ ಘಾಟಿಯ ಕಂದಕಕ್ಕೆ ಈಚರ್ ವಾಹನ ಉರುಳಿ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟ ನಾಲ್ವರು ಕಾರ್ಕಳದ ಮಿಯ್ಯಾರಿನವರು ಎಂದು ತಿಳಿದುಬಂದಿದೆ. ಘಟನೆಯ ಪರಿಣಾಮ ಐವರು ಗಂಭೀರ ಗಾಯಗೊಂಡಿದ್ದಾರೆ.ಈಚರ್ ವಾಹನವನ್ನು ಜೋಡುಕಟ್ಟೆಯ ಯಜ್ಞೇಶ್ ಚಾಲನೆ ಮಾಡುತ್ತಿದ್ದರು. ಶಿವಮೊಗ್ಗದಿಂದ ಹೆಬ್ರಿ ಕಡೆಗೆ ಬರುತ್ತಿದ್ದ ಈಚರ್ ಲಾರಿ ಘಾಟಿ ರಸ್ತೆಯ 5 ನೇ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ನಾನು ಸಿಎಂ ಆಗಲು ಇಲ್ಲಿ ಬಂದಿಲ್ಲ , ಆದರೆ ಕೇಂದ್ರಕ್ಕೆ ದಾದಾಗಿರಿ ಮಾಡಲು ಬಿಡುವುದಿಲ್ಲ : ಮಮತಾ ಬ್ಯಾನರ್ಜಿ – Vishwanews24