ಕಾರ್ಕಳ: ಫಾಲ್ಸ್ ವೀಕ್ಷಣೆಗೆ ಬಂದಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು -Vishwanews24

Featured, ಉಡುಪಿ

ಕಾರ್ಕಳ: ಫಾಲ್ಸ್ ವೀಕ್ಷಣೆಗೆ ಬಂದಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು -Vishwanews24

ಕಾರ್ಕಳ: ಅಜೆಕಾರು ಸಮೀಪದ ಮುಂಡ್ಲಿ ಫಾಲ್ಸ್ ವೀಕ್ಷಣೆಗೆ ಬಂದಿದ್ದ ತಂಡದಲ್ಲಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ನಡೆದಿದೆ.

ಮೃತ ಯುವಕನನ್ನು ವೇಣೂರು ಪಡ್ಡನಡ್ಕ ನಿವಾಸಿ ಕಿರಣ್ (21) ಎಂದು ಗುರುತಿಸಲಾಗಿದೆ.

ಭಾನುವಾರ ಮೂಡಬಿದ್ರೆ ನಿವಾಸಿಗಳಾದ ಐದು ಮಂದಿ ಅರ್ಬಿ ಮುಂಡ್ಲಿ ಫಾಲ್ಸ್ ಗೆ ಬಂದಿದ್ದು ನೀರಿನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಕಿರಣ್ ಈಜು ಬಾರದೆ ನೀರನಲ್ಲಿ ಮುಳುಗಿ ಸಾವನಪ್ಪಿದ್ದಾರೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.