ಕಾಶ್ಮೀರದ ಪರವಾಗಿ ಮಾತನಾಡುವ ನೈತಿಕ ಹಕ್ಕು ಪಾಕಿಸ್ತಾನಕ್ಕೆ ಇಲ್ಲ : ನದೀಂ ನುಸ್ರತ್ -Vishwanews24
ನವದೆಹಲಿ : ಪಾಕಿಸ್ತಾನವು ತನ್ನದೇ ನೆಲದಲ್ಲಿರುವ, ದೇಶಭ್ರಷ್ಟರು ಎಂದು ಘೋಷಿಸಿರುವ ಮೊಹಾಜಿರ್, ಬಲೂಚ್, ಪಸ್ತೂನ್ ಮತ್ತು ಹಜ್ರಾ ನಾಗರಿಕರಿಗೆ ಮೊದಲು ನ್ಯಾಯ ಒದಗಿಸಲಿ ಅಲ್ಲಿಯವರೆಗೆ ಪಾಕ್ ಕಾಶ್ಮೀರದ ಪರವಾಗಿ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಮೊಹಾಜಿರ್ ಸಂಘಟನೆ ವಾಯ್ಸ್ ಆಫ್ ಕರಾಚಿಯ ಮುಖಂಡ ನದೀಂ ನುಸ್ರತ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ಮತ್ತು ವಿಶೇಷ ಸ್ಥಾನಮಾನ ಒದಗಿಸಿಕೊಡುತ್ತಿದ್ದ ಭಾರತೀಯ ಸಂವಿಧಾನದ 370 ಮತ್ತು 35 ಎ ವಿಧಿಗಳನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸೋಮವಾರ ರದ್ದಗೊಳಿಸಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ನದೀಂ, ಕಾಶ್ಮೀರದ ವಿಷಯದಲ್ಲಿ ಮಾತನಾಡುವ ನೈತಿಕ ಹಕ್ಕು ಪಾಕಿಸ್ತಾನಕ್ಕೆ ಇಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನ ತನ್ನದೇ ಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿದೆ. ಮಾನವ ಹಕ್ಕುಗಳನ್ನು ದಮನಗೊಳಿಸಿದೆ. ಹೀಗಿರುವಾಗ ಕಾಶ್ಮೀರದ ವಿಷಯವಾಗಿ ಜಾಗತಿಕ ವೇದಿಕೆಯಲ್ಲಿ ಪ್ರಶ್ನಿಸಲು ಅದಕ್ಕೆ ನೈತಿಕ ಹಕ್ಕು ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
