ಕಿಕ್​​​ ಬಾಕ್ಸಿಂಗ್ ಕಂಟಕ : ಎದುರಾಳಿ ಪಂಚ್​ಗೆ ​​ ಪ್ರಾಣ ಬಿಟ್ಟ ಯುವಕ – Vishwanews24

Featured, ರಾಜ್ಯ ನ್ಯೂಸ್

ಕಿಕ್​​​ ಬಾಕ್ಸಿಂಗ್ ಕಂಟಕ : ಎದುರಾಳಿ ಪಂಚ್​ಗೆ ​​ ಪ್ರಾಣ ಬಿಟ್ಟ ಬಾಕ್ಸರ್

ಬೆಂಗಳೂರು: ಕಿಕ್ ಬಾಕ್ಸಿಂಗ್​ನಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಯುವಕ‌ನೊಬ್ಬ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೃತ ಯುವಕನನ್ನು ನಿಖಿಲ್ (24)ಎಂದು ಗುರುತಿಸಲಾಗಿದ್ದು, ಈತ ಬೆಂಗಳೂರಿನ ಕೆಂಗೇರಿಯಲ್ಲಿ ಕೆ1 ಕಿಕ್ ಬಾಕ್ಸರ್ ಆರ್ಗನೈಸೇಷನ್ ವತಿಯಿಂದ ಜುಲೈ 10ರಂದು ನಡೆದ ಕಿಕ್ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ.

ಇನ್ನು ಕಿಕ್ ಬಾಕ್ಸಿಂಗ್​ನ ರಿಂಗ್‌ನಲ್ಲಿ ಸೆಣಸಾಡುತ್ತಿರುವಾಗ ಎದುರಾಳಿಯು ನಿಖಿಲ್​ ತಲೆಗೆ ಹೊಡೆದ ಏಟಿಗೆ ಬಾಕ್ಸಿಂಗ್ ರಿಂಗ್​ನಲ್ಲೇ ನಿಖಿಲ್​ ಕೆಳಗೆ ಬಿದ್ದವರು ಮೇಲಕ್ಕೆ ಏಳಲೇ ಇಲ್ಲ. ತಕ್ಷಣ ಅವರನ್ನು ಬೆಂಗಳೂರಿನ‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಎರಡು ದಿನ ಕೋಮಾದಲ್ಲಿದ್ದ ನಿಖಿಲ್, ಚಿಕಿತ್ಸೆ ಫಲಿಸದೆ ಬುಧವಾರ ಕೊನೆಯುಸಿರೆಳೆದಿದ್ದಾನೆ.

ನಿಖಿಲ್​ ತಂದೆ ಸುರೇಶ್​ ಕರಾಟೆ ಪಟುವಾಗಿದ್ದಾರೆ. ನಿಖಿಲ್​​ ಮೈಸೂರು ಜಯನಗರದ ವಿಕ್ರಂ ಬಳಿ ತರಬೇತಿ ಪಡೆಯುತ್ತಿದ್ದ .

ಸಿಎಂ ಫ್ಯಾಶನ್ ಶೋ , ಪೋಟೋ ಶೂಟ್ ಗಾಗಿ ಮಳೆಹಾನಿ ಪ್ರದೇಶಗಳಿಗೆ ಹೋಗಿದ್ದಾರೆ :  ಬಿ.ಕೆ. ಹರಿಪ್ರಸಾದ್ – Vishwanews24

Leave a Reply