ಕಿನ್ನಿಗೋಳಿ : ಮುಚ್ಚಿ ಹೋದ ಬಾವಿಯಲ್ಲಿ 300 ವರ್ಷಗಳ ಹಳೆಯ ದೈವಗಳ ಪರಿಕರಗಳು ಪತ್ತೆ -Vishwanews24
ಕಿನ್ನಿಗೋಳಿ : ಮುಚ್ಚಿ ಹೋದ ಬಾವಿಯಲ್ಲಿ 300 ವರ್ಷಗಳ ಹಳೆಯ ದೈವಗಳ ಪರಿಕರಗಳು ಪತ್ತೆ -Vishwanews24
ಮಂಗಳೂರು,: ಕಿನ್ನಿಗೋಳಿಯಲ್ಲಿ ಮುಚ್ಚಿ ಹೋದ ಬಾವಿ ಉತ್ಖನನದ ವೇಳೆ 300 ವರ್ಷಗಳ ಹಿಂದಿನ ದೈವಗಳ ಪರಿಕರ ಪತ್ತೆಯಾದ ಘಟನೆ ನಡೆದಿದೆ.
ಕಾಲ ಕ್ರಮೇಣ ಜೀರ್ಣಾವಸ್ಥೆಗೆ ತಲುಪಿದ್ದ ದೇವಸ್ಥಾನ ಇದೀಗ ಜೀರ್ಣೋದ್ಧಾರದ ಮೂಲಕ ಬೆಳಕಿಗೆ ಬಂದಿದ್ದು, ಈ ಜೀರ್ಣೋದ್ಧಾರದ ಸಂದರ್ಭದಲ್ಲಿ ದೈವ ನೀಡಿದ್ದ ನುಡಿ ಸತ್ಯವಾಗಿದೆ. ಈ ಘಟನೆ ಕಿನ್ನಿಗೋಳಿ ಸಮೀಪದ ಬಳ್ಕುಂಜೆಯ ಮೂಡಾಯಿಗುತ್ತು ಮನೆಯಲ್ಲಿ ನಡೆದಿದ್ದು, ಮುಚ್ಚಿ ಹೋದ ಬಾವಿಯಲ್ಲಿ ದೈವಗಳ ಪರಿಕರ ಪತ್ತೆಯಾಗಿದೆ.
ಹಲವಾರು ತೊಂದರೆ ಎದುರಿಸುತ್ತಿದ್ದ ಈ ಕುಟುಂಬದವರು ಕೊನೆಗೆ ದೈವ – ದೇವರುಗಳ ಮೊರೆ ಹೋಗಿದ್ದು, ದೈವ ದರ್ಶನದ ವೇಳೆ ‘ಹಿಂದೆ ಮುಚ್ಚಿ ಹೋಗಿರುವ ಬಾವಿ ಅಗೆದು ನೋಡಿ’ ಎಂದು ನುಡಿ ನೀಡಿದೆ.
ಮೂಡಾಯಿಗುತ್ತು ಮನೆಯವರು, ಸತ್ಯ ದೇವತೆ, ಅಣ್ಣಪ್ಪ ಪಂಜುರ್ಲಿ ಜೀರ್ಣೋದ್ಧಾರ ಮಾಡಿದ್ದು, ಈ ವೇಳೆ ದಿವಾಕರ ಪೂಜಾರಿ ಅವರ ದರ್ಶನದಲ್ಲಿ ದೈವದ ನುಡಿಯಲ್ಲಿ ಬಾವಿ ತೋಡುವಂತೆ ಹೇಳಿದ್ದಾರೆ. ಇದರಂತೆ ಮುಚ್ಚಿ ಹೋದ ಬಾವಿಯನ್ನು ಮತ್ತೆ ತೋಡಿದಾಗ ಬಾವಿಯಲ್ಲಿ ಲ್ಲಿ 300 ವರ್ಷಗಳ ಹಿಂದಿನ ದೈವದ ಮೂರ್ತಿ, ಆಭರಣ, ಕತ್ತಿ ದೊರಕಿದೆ.
