ಕುಂದಾಪುರ: ಕಾರು ಢಿಕ್ಕಿ – ವೃದ್ಧ ದಂಪತಿ ಸಾವು – Vishwanews24

Featured, ಉಡುಪಿ

ಕುಂದಾಪುರ: ಕಾರು ಢಿಕ್ಕಿ – ವೃದ್ಧ ದಂಪತಿ ಸಾವು

ಕುಂದಾಪುರ: ಕುಂದಾಪುರದ ವಿನಾಯಕ ಚಿತ್ರ‌ಮಂದಿರದ ಎದುರಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರು ಢಿಕ್ಕಿಯಾಗಿ ವೃದ್ಧ ದಂಪತಿ ಸಾವನ್ನಪ್ಪಿರುವ ಘಟ‌ನೆ ನಡೆದಿದೆ.

ಬ್ರಹ್ಮಾವರ ತಾಲೂಕಿನ ಹಾರಾಡಿ ಗ್ರಾಮದ ಹೊನ್ನಾಳ ನಿವಾಸಿಗಳಾದ ಮಹಾಬಲ ಶೆಟ್ಟಿ (68) ಹಾಗೂ ಅವರ ಪತ್ನಿ ಸರೋಜಾ ಶೆಡ್ತಿ (60) ಸಾವನ್ನಪ್ಪಿದ ದಂಪತಿ.

ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಕಾರು ಸಂಚರಿಸುತ್ತಿತ್ತು ಎನ್ನಲಾಗಿದ್ದು, ಕುಂದಾಪುರದ ಇವರ ಸಂಬಂಧಿಕರ ಮೆನೆಗೆ ಹೋಗಿ ವಾಪಸು ತೆರಳುವ ವೇಳೆ ಈ ಅವಘಡ ಸಂಭವಿಸಿದೆ.

ವೈಯಕ್ತಿಕ ವಿಚಾರಗಳಲ್ಲಿ ಗಮನಹರಿಸಿ  : ನೋಡಿ ಇಂದಿನ ದಿನ ಭವಿಷ್ಯ  -Vishwanews24

ಇನ್ನು ಘಟನೆಯಿಂದ ಮಹಾಬಲ ಶೆಟ್ಟಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದ ಸರೋಜಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಾರೆ.

ಕಾರು ಚಾಲಕ ಮಂಜುನಾಥ ಅವರ ವಿರುದ್ಧ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ವೈಯಕ್ತಿಕ ವಿಚಾರಗಳಲ್ಲಿ ಗಮನಹರಿಸಿ  : ನೋಡಿ ಇಂದಿನ ದಿನ ಭವಿಷ್ಯ  -Vishwanews24

Leave a Reply