ಕುಂದಾಪುರ: ನಾನು ಹಿಜಾಬ್‌ನ್ನು ಸಮವಸ್ತ್ರ ಆಧಾರಿತವಾಗಿ ನೋಡಿದ್ದೇ ಹೊರತು ಧರ್ಮಾಧಾರಿತವಾಗಿ ಮಾಡಿಲ್ಲ : ಅಲಿಯಾ ಅಸ್ಸಾದಿಗೆ ರಘುಪತಿ ಭಟ್ ತಿರುಗೇಟು – vishwanews24

Featured, ಉಡುಪಿ

ಕುಂದಾಪುರ: ನಾನು ಹಿಜಾಬ್‌ನ್ನು ಸಮವಸ್ತ್ರ ಆಧಾರಿತವಾಗಿ ನೋಡಿದ್ದೇ ಹೊರತು ಧರ್ಮಾಧಾರಿತವಾಗಿ ಮಾಡಿಲ್ಲ : ಅಲಿಯಾ ಅಸ್ಸಾದಿಗೆ ರಘುಪತಿ ಭಟ್ ತಿರುಗೇಟು

ಕುಂದಾಪುರ: ನಾನು ಹಿಜಾಬ್‌ನ್ನು ಸಮವಸ್ತ್ರ ಆಧಾರಿತವಾಗಿ ನೋಡಿದ್ದೇ ಹೊರತು ಧರ್ಮಾಧಾರಿತವಾಗಿ ಮಾಡಿಲ್ಲ ಎಂದು ಹಿಜಾಬ್ ಪರ ಹೋರಾಟಗಾರ್ತಿ ಅಲಿಯಾ ಅಸ್ಸಾದಿಗೆ ಮಾಜಿ ಶಾಸಕ ರಘುಪತಿ ಭಟ್ ತಿರುಗೇಟು ನೀಡಿದ್ದಾರೆ.

ಕುಂದಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಶಾಸಕನಾಗುವ ಮೊದಲು ಆ ಕಾಲೇಜಿನಲ್ಲಿ ವಸ್ತ್ರಸಂಹಿತೆ ಜಾರಿಯಲ್ಲಿತ್ತು. ಆ ವಿದ್ಯಾರ್ಥಿನಿ ಕೆಲವು ಸಂಘಟನೆಗಳ ಪ್ರಭಾವದಿಂದ ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವ ವಿಚಾರದಲ್ಲಿ ವಿವಾದ ಸೃಷ್ಟಿಯಾಯಿತು. ಆಕೆ ಕಾಲೇಜಿನ ಶಿಸ್ತು ತಪ್ಪಿದ್ದರಿಂದ ಹೀಗೆಲ್ಲಾ ಆಯಿತು ಎಂದರು.

ಮಂಗಳೂರು : ರಸ್ತೆಯಲ್ಲಿ ನಮಾಜ್​ – ಇಂತಹ ಸಣ್ಣ ವಿಷಯವನ್ನು ರಂಪಾಟ ಮಾಡುವ ಅಗತ್ಯ ಇರಲಿಲ್ಲ : ರಮಾನಾಥ ರೈ – vishwanews24

ನಾನು ಮೂರು ಬಾರಿ ಶಾಸಕನಾಗಿ ಜನರ ಮನ್ನಣೆ ಗಳಿಸಿದ್ದೇನೆ. ಆಕೆ ಒಳ್ಳೆಯ ಶಿಕ್ಷಣ ಕಲಿಯುವಂತೆ ಹಾರೈಸುತ್ತೇನೆ. ಶಿಕ್ಷಣದಿಂದ ಧರ್ಮಾಂದತೆ, ದೇಶ ದ್ರೋಹದ ಭಾವನೆ ಬರಲ್ಲ ಎಂದು ಅವರು ತಿಳಿಸಿದರು.

Leave a Reply