ಕುಂದಾಪುರ : ಪುನೀತ್ ಗೆ ಯಾವ ಪ್ರಶಸ್ತಿ ಕೊಟ್ಟರೂ ಕಡಿಮೆಯೇ: ಸಚಿವ ಕೋಟ – Vishwanews24

Featured, ಉಡುಪಿ

ಕುಂದಾಪುರ : ಪುನೀತ್ ಗೆ ಯಾವ ಪ್ರಶಸ್ತಿ ಕೊಟ್ಟರೂ ಕಡಿಮೆಯೇ: ಸಚಿವ ಕೋಟ – Vishwanews24

ಕುಂದಾಪುರ: ಕಲೆ, ಸಾಹಿತ್ಯ, ಸಿನಿಮಾ ಲೋಕ ಸೇರಿದಂತೆ ಸಮಾಜದಲ್ಲಿರುವ ಪ್ರತೀ ಕುಟುಂಬದ ಮನಸ್ಸಿನಲ್ಲಿರುವ ವ್ಯಕ್ತಿ ಪುನೀತ್ ರಾಜ್ ಕುಮಾರ್. ಅವರಿಗೆ ಯಾವ ಪ್ರಶಸ್ತಿ ಕೊಟ್ಟರೂ ಕಡಿಮೆಯೇ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

ಕುಂದಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪುನೀತ್ ರಾಜ್ ಕುಮಾರ್ ಅಕಾಲಿಕ ಸಾವು ಕೇವಲ ಸಾಹಿತ್ಯ, ಸಿನಿಮಾ ಲೋಕಕ್ಕೆ ಮಾತ್ರವಲ್ಲ ಇಡೀ ಕರ್ನಾಟಕದ ಆರುವರೆ ಕೋಟಿ ಜನರಿಗೂ ದುಃಖವುಂಟು ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸುನಿಲ್ ಕುಮಾರ್ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮುಂದಿನ ದಿನಗಳಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಅವರ ಗೌರವಕ್ಕೆ ತಕ್ಕಂತೆ ಸ್ಮಾರಕಗಳು ಸೇರಿದಂತೆ ಎಲ್ಲಾ ಗೌರವಗಳನ್ನು ಕೊಡುತ್ತಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಅದು ಕೊಡಿ, ಇದು ಕೊಡಿ ಎಂಬುದು ಶಿಷ್ಟಾಚಾರವಾಗುವುದಿಲ್ಲ. ಯಾರೇನೆ ಹೇಳಿದರು ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಕೊಡಲು ಸರ್ಕಾರ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ವಾಯುಭಾರ ಕುಸಿತ : ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ 4 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್‌ ಮುಂದುವರಿಕೆ – Vishwanews24