ಕೃಷಿ ಕಾಯ್ದೆ ವಾಪಸ್ : ದೇಶದ ಅನ್ನದಾತರಿಗೆ ಅಭಿನಂದನೆಗಳು : ವಾಟಾಳ್ ನಾಗರಾಜ್- Vishwanews24

Featured, ರಾಜ್ಯ ನ್ಯೂಸ್

ಕೃಷಿ ಕಾಯ್ದೆ ವಾಪಸ್ : ರೈತರಿಗೆ ವಾಟಾಳ್ ನಾಗರಾಜ್ ಅಭಿನಂದನೆ – Vishwanews24

ಬೆಂಗಳೂರು: ಕೊನೆಗೂ ಅನ್ನದಾತರ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದಿದ್ದು, ಈ ಹಿನ್ನೆಲೆಯಲ್ಲಿ ರೈತರಿಗೆ ಕನ್ನಡ ಚಳವಳಿ ವಾಟಾಳ್ ಪಕ್ಷ ಅಧ್ಯಕ್ಷ ವಾಟಾಳ್ ನಾಗರಾಜ್ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಸತತವಾಗಿ 15 ತಿಂಗಳುಗಳಿಂದ ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸಿದ ಹೋರಾಟಕ್ಕೆ ದೇಶಾದ್ಯಂತ ರೈತರು, ಹೋರಾಟಗಾರರು ಜೊತೆಗೂಡಿ ಕೇಂದ್ರ ಸರ್ಕಾರದ ಮೊಂಡುತನದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸಿದ್ದರು. ಕರ್ನಾಟಕದಲ್ಲಿ ಕೂಡ ರೈತರ ಪರವಾಗಿ 3 ಕೃಷಿ ಕಾಯ್ದೆ ವಿರುದ್ಧ ಹೋರಾಟ ನಡೆಸಿದ್ದು, ಇದೀಗ ಈ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ. ಹೀಗಾಗಿ ಮತ್ತೊಮ್ಮೆ ದೇಶದ ಅನ್ನದಾತರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.

ವಿವಾದಿತ ಕೃಷಿ ಕಾಯ್ದೆಯನ್ನು ವಾಪಸ್ ಪಡೆದುಕೊಂಡಿದೆ. ದೇಶದ ರೈತರ 355 ದಿನಗಳ ಹೋರಾಟದ ನಂತರ ಫಲ ಸಿಕ್ಕಂತಾಗಿದೆ. ಕೃಷಿ ಕಾನೂನು ಹೋರಾಟದಲ್ಲಿ 600ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡಿದ್ದಾರೆ.

ವಾಯುಭಾರ ಕುಸಿತದಿಂದ ತಿರುಪತಿಯಲ್ಲಿ ಪ್ರವಾಹ ಪರಿಸ್ಥಿತಿ ; ಬೆಟ್ಟದಿಂದ ಜಲಪಾತದಂತೆ ಧುಮ್ಮಿಕ್ಕುತ್ತಿದೆ ಮಳೆ ನೀರು – Vishwanews24