ಕೊಟ್ಟ ಮಾತಿನಂತೆ ಶಿವಮೊಗ್ಗದಲ್ಲಿ ‘ಏರ್ ಪೋರ್ಟ್’ ನಿರ್ಮಾಣ : ‘BSY’ ಸಂತಸ – Vishwanews24

Featured, ರಾಜ್ಯ ನ್ಯೂಸ್

ಕೊಟ್ಟ ಮಾತಿನಂತೆ ಶಿವಮೊಗ್ಗದಲ್ಲಿ ‘ಏರ್ ಪೋರ್ಟ್’ ನಿರ್ಮಾಣ : ‘BSY’ ಸಂತಸ

ಶಿವಮೊಗ್ಗ : ಪ್ರಧಾನಿ ಮೋದಿಯವರು ಏರ್ ಪೋರ್ಟ್ ಉದ್ಘಾಟಿಸಿರುವುದು ಬಹಳ ಸಂತಸ ತಂದಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಪ್ರಧಾನಿ ಮೋದಿ ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟಿಸಿದ ಬಳಿಕ ಮಾಜಿ ಸಿಎಂ ಯಡಿಯೂರಪ್ಪ ವೇದಿಕೆಯಲ್ಲಿ ಮಾತನಾಡಿದರು.

ಕೊಟ್ಟ ಮಾತಿನಂತೆ ಏರ್ ಪೋರ್ಟ್ ನಿರ್ಮಾಣ ಮಾಡಿ ಚಾಲನೆ ನೀಡಿದ್ದೇವೆ. ಈ ದಿನ ಬಹಳ ವೈಶಿಷ್ಟ್ಯವಾಗಿದೆ. ಮೋದಿ ಆಶೀರ್ವಾದದಿಂದ ನಾಡಿನ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ ಎಂದು ಏರ್ ಪೋರ್ಟ್ ನಲ್ಲಿ ರಾಜಾಹುಲಿ ಅಬ್ಬರಿಸಿದರು. ನಿಮ್ಮ ಸೇವೆ ಮಾಡಲು ನನಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು, ಮಲೆನಾಡು ಜನರ ಕನಸು ಸಾಕಾರಗೊಂಡಿದೆ ಎಂದು ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಶಿವಮೊಗ್ಗ : ಸ್ಮಾರ್ಟ್ ಸಿಟಿ ಕಾಮಗಾರಿಗಳ ಉದ್ಘಾಟನೆ ಮಾಡಿದ ಮೋದಿ – Vishwanews24

Leave a Reply