ಕೊನೆಗೂ ರಾಜಕೀಯ ಸೇರುವ ಗುಟ್ಟು ಬಿಟ್ಟು ಕೊಟ್ಟ ಅಣ್ಣಾಮಲೈ: vishwanews24

Featured, ರಾಜ್ಯ ನ್ಯೂಸ್

ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಅಣ್ಣಾಮಲೈ

ಬೆಳಗಾವಿ: ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗ ಅವರ ಮುಂದಿನ ನಡೆ ಏನು ಅನ್ನೋ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು.ಅಣ್ಣಾಮಲೈ ರಾಜಕೀಯಕ್ಕೆ ಬರ್ತಾರೆ ಅಂತಲೂ ಹೇಳಲಾಗುತ್ತಿತ್ತು. ಆದ್ರೆ, ಈ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ.ಇದೀಗ ಅಣ್ಣಾಮಲೈ ಅವರು ರಾಜಕೀಯಕ್ಕೆ ಬರೋದು ಪಕ್ಕಾ ಆಗಿದೆ. ಈ ಬಗ್ಗೆ ಖುದ್ದು ಅವರೇ ಮಾತನಾಡಿದ್ದಾರೆ.

ಬೆಳಗಾವಿ ಅನ್ನೋ ಫೇಸ್​ಬುಕ್ ಪೇಜ್​ನ ಲೈವ್​ನಲ್ಲಿ ಮಾತನಾಡುವಾಗ ತಾವು ರಾಜಕೀಯಕ್ಕೆ ಎಂಟ್ರಿ ಕೊಡೋದಾಗಿ ಅಣ್ಣಾಮಲೈ ತಿಳಿಸಿದ್ದಾರೆ. ಸುಮಾರು ಒಂದೂ ಕಾಲು ಗಂಟೆಯ ಲೈವ್​ನಲ್ಲಿ ಆರಂಭದಲ್ಲೇ ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.ತಮಿಳುನಾಡಿನಲ್ಲಿ ನಾವೊಂದು ಫೌಂಡೇಷನ್ ಆರಂಭಿಸುತ್ತಿದ್ದೇವೆ. ಇದು ಗ್ರಾಮೀಣ ಭಾಗದಲ್ಲಿ ಲೀಡರ್​ಶಿಪ್​ ಬಗ್ಗೆ ಕಾರ್ಯ ನಿರ್ವಹಿಸಲಿದೆ.

ನಾನು ತಮಿಳುನಾಡು ರಾಜಕೀಯಕ್ಕೂ ಬರುತ್ತಿದ್ದೇನೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. 2021ರ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ.

ಅದರಲ್ಲಿ ಸ್ಪರ್ಧಿಸಬೇಕು ಅನ್ನೋ ಇಚ್ಛೆ ಇದೆ. ರಾಜಕೀಯಕ್ಕೆ ಹೋಗಿ ಒಂದಷ್ಟು ಬದಲಾವಣೆ ಮಾಡಬೇಕು ಅಂತಿದೆ.ಇದು ಅಣ್ಣಾಮಲೈ ತಮ್ಮ ಮುಂದಿನ ನಡೆ ಬಗ್ಗೆ ನೀಡಿರುವ ಮಾಹಿತಿ. ಈ ಮೂಲಕ ತಮಗೆ ರಾಜಕೀಯಕ್ಕೆ ಬರುವ ಆಸೆ ಇದೆ ಅಂತ ಹೇಳಿದ್ದಾರೆ.ಅಲ್ಲದೆ, ಮುಂದಿನ ಚುನಾವಣೆಯಲ್ಲಿಯೇ ಸ್ಪರ್ಧಿಸುವ ಬಗ್ಗೆಯೂ ಚಿಂತನೆ ನಡೆಸಿರೋದಾಗಿ ಅವರು ತಿಳಿಸಿದ್ದಾರೆ.