ಗಣೇಶ ಚತುರ್ಥಿ ಹಿನ್ನೆಲೆ : ಮುಂಬಯಿ ಸೆಂಟ್ರಲ್‌ – ತೋಕೂರ್‌ ವಿಶೇಷ ರೈಲು ಸಂಚಾರ – vishwanews24

Featured, ಉಡುಪಿ, ದಕ್ಷಿಣ ಕನ್ನಡ

ಗಣೇಶ ಚತುರ್ಥಿ ಹಿನ್ನೆಲೆ : ಮುಂಬಯಿ ಸೆಂಟ್ರಲ್‌ – ತೋಕೂರ್‌ ವಿಶೇಷ ರೈಲು ಸಂಚಾರ

ಮಂಗಳೂರು/ಉಡುಪಿ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕರಾವಳಿಯ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮುಂಬಯಿ ಸೆಂಟ್ರಲ್‌-ತೋಕೂರ್‌-ಮುಂಬಯಿ ಸೆಂಟ್ರಲ್‌ (ಸಾಪ್ತಾಹಿಕ) ವಿಶೇಷ ಸಂಚಾರಕ್ಕೆ ಕೊಂಕಣ ರೈಲ್ವೇ ನಿರ್ಧರಿಸಿದೆ.

ರೈಲು ಸಂಖ್ಯೆ 09011 ಮುಂಬಯಿ ಸೆಂಟ್ರಲ್‌-ತೋಕೂರ್‌ ಸಾಪ್ತಾಹಿಕ ವಿಶೇಷ ರೈಲು ಆ. 26 ಮತ್ತು ಸೆ. 2ರ ಬೆಳಗ್ಗೆ 11.30ಕ್ಕೆ ಮುಂಬಯಿ ಸೆಂಟ್ರಲ್‌ನಿಂದ ಹೊರಡಲಿದೆ. ರೈಲು ಸಂಖ್ಯೆ 09012 ತೋಕೂರ್‌-ಮುಂಬಯಿ ಸೆಂಟ್ರಲ್‌ ಸಾಪ್ತಾಹಿಕ ವಿಶೇಷ ರೈಲು ಆ. 27 ಮತ್ತು ಸೆ. 3ರಂದು ಬೆಳಗ್ಗೆ 11 ಗಂಟೆಗೆ ತೋಕೂರಿನಿಂದ ಹೊರಡಲಿದೆ. ಒಟ್ಟು 24 ಕೋಚ್‌ಗಳಲ್ಲಿ 2 ಹಾಗೂ 3 ಟೈಯರ್‌ ಎಸಿಯ ತಲಾ 1 ಕೋಚ್‌, 16 ಸ್ಲೀಪರ್‌, 4 ಸಾಮಾನ್ಯ ಕೋಚ್‌ ಮತ್ತು 2 ಎಸ್‌ಎಲ್‌ಆರ್‌ ಕೋಚ್‌ಗಳಿರಲಿವೆ.

ಉಡುಪಿ:ಚಾಲಕನ ನಿಯಂತ್ರಣ ತಪ್ಪಿ  ಡಿವೈಡರ್ ಗೆ ಢಿಕ್ಕಿ ಹೊಡೆದ  ಕೆಎಸ್ಸಾರ್ಟಿಸಿ ಬಸ್ ; ಪ್ರಯಾಣಿಕರು ಪಾರು – vishwanews24

ಈ ರೈಲು ಬೋರಿವಲಿ, ವಸಾಯಿ ರಸ್ತೆ, ಭಿವಂಡಿ ರಸ್ತೆ, ಪನ್ವೇಲ್‌, ಪೆನ್‌, ರೋಹಾ, ಮಂಗಾಂವ್‌, ವೀರ್‌, ಖೇಡ್‌, ಚಿಪ್ಲುನ್‌, ಸಂಗಮೇಶ್ವರ ರಸ್ತೆ, ರತ್ನಾಗಿರಿ, ರಾಜಾಪುರ ರಸ್ತೆ, ವೈಭವವಾಡಿ ರಸ್ತೆ, ಕಂಕಾವಲಿ, ಸಿಂಧುದುರ್ಗ, ಕುಡಾಲ್‌, ಸಾವಂತವಾಡಿ ರಸ್ತೆ, ಥಿವಿಂ, ಕರ್ಮಾಲಿ, ಮಡ್ಗಾಂವ್‌, ಕಾರವಾರ, ಗೋಕಣ ರಸ್ತೆ, ಕುಮಟಾ, ಮುರುಡೇಶ್ವರ, ಮೂಕಾಂಬಿಕಾ ರಸ್ತೆ (ಬೈಂದೂರು), ಕುಂದಾಪುರ, ಉಡುಪಿ, ಮೂಲ್ಕಿ ಮತ್ತು ಸುರತ್ಕಲ್‌ ನಿಲ್ದಾಣಗಳಲ್ಲಿ ನಿಲ್ಲಲಿದೆ ಎಂದು ಪ್ರಕಟನೆ ತಿಳಿಸಿದೆ.

Leave a Reply