ಗೃಹಿಣಿಯ ಜೊತೆ ಪುತ್ರ ಪರಾರಿ : ಮನನೊಂದ ಹೆತ್ತವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣು

Featured, ಜಿಲ್ಲೆ

ರಾಮನಗರ: ಗೃಹಿಣಿಯೊಬ್ಬಳ ಜತೆ ಪುತ್ರ ಓಡಿ ಹೋದ ಹಿನ್ನೆಲೆಯಲ್ಲಿ ಹೆತ್ತವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಕಲ್ಲಿಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಕಲ್ಲಿಗೌಡನದೊಡ್ಡಿಯಲ್ಲಿ ಘಟನೆ ನಡೆದಿದ್ದು, ಗೃಹಿಣಿ ಸಂಬಂಧಿಕರು ಯುವಕನ ಮನೆಮುಂದೆ ಗಲಾಟೆ ಮಾಡಿದ ನಂತರ ಮನನೊಂದ ಪಾಲಕರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಿದ್ದರಾಜು(52), ಸಾಕಮ್ಮ(42) ಮೃತ ದುರ್ದೈವಿಗಳು. ಸಿದ್ದರಾಜು ಹಾಗೂ ಸಾಕಮ್ಮ ದಂಪತಿ ಪುತ್ರ ಮನು ಎಂಬಾತ ಅದೇ ಗ್ರಾಮದಲ್ಲಿದ್ದ ಪಲ್ಲವಿ ಎಂಬ ಗೃಹಿಣಿಯ  ಜೊತೆ ಓಡಿಹೋಗಿದ್ದು , ಗೃಹಿಣಿಯ ಕುಟುಂಬಸ್ಥರಿಂದ ಯುವಕನ ಮನೆ ಮುಂದೆ ಗಲಾಟೆ ಮಾಡಿದ್ದಾರೆ. ಇದರಿಂದ ಮನನೊಂದ ಹೆತ್ತವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ದೇಹಗಳನ್ನು ಕನಕಪುರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.