ಗೋಮಾಂಸ ಭಕ್ಷಣೆ ಪದ್ಧತಿ ನಿಂತರೆ ದೇಶದಲ್ಲಿ ಅಪರಾಧ ಕಡಿಮೆ: RSS ನಾಯಕ ಇಂದ್ರೇಶ್ ಕುಮಾರ್
ರಾಂಚಿ : ದೇಶದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಬೇಕಾದರೆ ಗೋಮಾಂಸ ತಿನ್ನುವ ಪದ್ದತಿಯನ್ನು ನಿಲ್ಲಿಸಬೇಕು ಎಂದು ಆರ್ಎಸ್ಎಸ್ ನಾಯಕ ಹಾಗೂ ಕಾರ್ಯಕಾರಣಿ ಸದಸ್ಯರಾಗಿರುವ ಇಂದ್ರೇಶ್ ಕುಮಾರ್ ಹೇಳಿದ್ದಾರೆ.
ಅಮಾಯಕರನ್ನು ಚಚ್ಚಿ ಸಾಯಿಸುವ ಗುಂಪು ಹಿಂಸೆಯಂತಹ “ಸೈತಾನನ ಅಪರಾಧಗಳನ್ನು’ ನಿಲ್ಲಿಸಲು ಗೋಮಾಂಸ ತಿನ್ನುವ ಪದ್ಧತಿಯನ್ನು ನಿಲ್ಲಿಸಬೇಕು ಎಂದು ಇಂದ್ರೇಶ್ ಹೇಳಿದರು.
ಹಿಂದೂ ಜಾಗರಣ ಮಂಚದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಇಂದ್ರೇಶ್, ” ಗೋಹತ್ಯೆಗೆ ಯಾವ ಧರ್ಮದಲ್ಲೂ ಅನುಮತಿ ಇಲ್ಲ’ ಎಂದು ಹೇಳಿದರು.
