ತೆಕ್ಕಟ್ಟೆ :ನಿಯಂತ್ರಣ ತಪ್ಪಿ ಕಡಲ ತೀರಕ್ಕೆ ಬಂದು ಅಪ್ಪಳಿಸಿದ ಮೀನುಗಾರಿಕಾ ಬೋಟ್; ಮೀನುಗಾರರು ಪಾರು – Vishwanews24
ತೆಕ್ಕಟ್ಟೆ :ನಿಯಂತ್ರಣ ತಪ್ಪಿ ಕಡಲ ತೀರಕ್ಕೆ ಬಂದು ಅಪ್ಪಳಿಸಿದ ಮೀನುಗಾರಿಕಾ ಬೋಟ್; ಮೀನುಗಾರರು ಪಾರು
ತೆಕ್ಕಟ್ಟೆ : ಚಾಲಕನ ನಿಯಂತ್ರಣ ತಪ್ಪಿದ ಮೀನುಗಾರಿಕಾ ಬೋಟೊಂದು ಕಡಲ ತೀರಕ್ಕೆ ಬಂದು ಅಪ್ಪಳಿಸಿದ ಘಟನೆ ಸೋಮವಾರ ತಡರಾತ್ರಿ 1 ಗಂಟೆ ಸುಮಾರಿಗೆ ನಡೆದಿದೆ.
ಗಂಗೊಳ್ಳಿ ಮೂಲದ ಬೋಟ್ ಎನ್ನಲಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಬೋಟಿನಲ್ಲಿ ಸುಮಾರು ೬ ಮಂದಿ ಮೀನುಗಾರರಿದ್ದರು ಎಂದು ಹೇಳಲಾಗಿದೆ.
ಬೋಟ್ ಸುರಕ್ಷಿತವಾಗಿ ನೀರಿನಿಂದ ಮೇಲೆತ್ತುವ ನಿಟ್ಟಿನಿಂದ ಬೋಟ್ ಒಳಗಿನ ಸರಕುಗಳನ್ನು ಹೊರ ತೆಗೆಯುವಲ್ಲಿ ಮೀನುಗಾರರು ಶ್ರಮಿಸುತ್ತಿದ್ದಾರೆ.
ಉಡುಪಿ: ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ರಮೇಶ್ ಕಾಂಚನ್ ಅರ್ಜಿ ಸಲ್ಲಿಕೆ – Vishwanews24
