ತ್ರಾಸಿ ರಸ್ತೆ ಅಪಘಾತ: ಮೂಳೂರು ಅಲ್ ಇಹ್ಸಾನ್ ಉಪನ್ಯಾಸಕ ಮೃತ್ಯು
ಗಂಗೊಳ್ಳಿ, : ಇಲ್ಲಿಗೆ ಸಮೀಪದ ತ್ರಾಸಿ ಹೆದ್ದಾರಿ 66ರಲ್ಲಿ ಬೈಕ್ ಮತ್ತು ಬೊಲೆರೋ ವಾಹನ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಮೂಳೂರು ಅಲ್ ಇಹ್ಸಾನ್ ಎಜು ಪ್ಲಾನೆಟ್ ಉಪನ್ಯಾಸಕ ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ರವಿವಾರ ಮಧ್ಯಾಹ್ನ ಸಂಭವಿಸಿದೆ.
ಮೃತರನ್ನು ಕೇರಳದ ಕಣ್ಣೂರ್ ನಿವಾಸಿ, ಉಪನ್ಯಾಸಕ ಸುಹೈಲ್ ಸಅದಿ ಎಂದು ಗುರುತಿಸಲಾಗಿದೆ. ಅಪಘಾತದ ನಂತರ ಬೊಲೆರೋ ಪಲ್ಟಿಯಾದ ಪರಿಣಾಮ ಸುಹೈಲ್ ಸಅದಿ ಸಹಿತ ಮೂವರು ಗಂಭೀರ ಗಾಯಗೊಂಡಿದ್ದರು. ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ ಸವಾರ ಭಟ್ಕಳ ಮೂಲದ ಭರತ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

