ದುಷ್ಕರ್ಮಿಗಳಿಂದ ಸಚಿವ ಯು.ಟಿ ಖಾದರ್ ಪ್ಲೆಕ್ಸ್ ಗೆ ಹಾನಿ..https://wp.me/p9KQap-42H
ಮಂಗಳೂರು: ಕುತ್ತಾರ್ ಪಂಡಿತ್ ಹೌಸ್ ಬಳಿ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರ ಫ್ಲೆಕ್ಸ್ಗೆ ದುಷ್ಕರ್ಮಿಗಳು ಕತ್ತರಿ ಪ್ರಯೋಗ ಮಾಡಿದ್ದಾರೆ. ಪ್ಲೆಕ್ಸ್ ಹಾಳು ಮಾಡಿರುವುದು ಶುಕ್ರವಾರ ಬೆಳಕಿಗೆ ಬಂದಿದೆ. ಆದರೆ ಪಕ್ಕದಲ್ಲಿರುವ ಪೊಲೀಸರ ಅಭಿನಂದನೆ ಪ್ಲೆಕ್ಸ್ ಗೆ ಯಾವುದೇ ಹಾನಿಯಾಗಿಲ್ಲ.
ನಗರ ಸಭೆಗೆ ಇತ್ತೀಚೆಗೆ ನಡೆದ ಚೆಂಬುಗುಡ್ಡೆ ವಾರ್ಡ್ನಲ್ಲಿ ಕಾಂಗ್ರೆಸಿಂದ ಗೆದ್ದ ರಕ್ಷಿತಾ ಅವರಿಗೆ ಅಭಿನಂದನೆ ಕೋರಿ ಕಾರ್ಯಕರ್ತರು ದೊಡ್ಡ ಪ್ಲೆಕ್ಸ್ ಹಾಕಿದ್ದರು. ಇದರಲ್ಲಿ ಶಾಸಕರೂ, ಉಸ್ತುವಾರಿ ಸಚಿವರೂ ಆದ ಯು.ಟಿ.ಖಾದರ್ ಅವರ ಫೋಟೊವನ್ನು ಹಾಕಿದ್ದರು. ಇದರಲ್ಲಿ ರಕ್ಷಿತಾ ಫೋಟೊಗೆ ಏನೂ ಹಾನಿ ಮಾಡದ ದುಷ್ಕರ್ಮಿಗಳು ಕೇವಲ ಖಾದರ್ ಭಾವಚಿತ್ರವನ್ನು ಹರಿದು ಹಾಕಿದ್ದಾರೆ.

ವಿಪರ್ಯಾಸ ಎಂದರೆ ಸ್ವಲ್ಪವೇ ಮುಂಭಾಗದಲ್ಲಿ ನಗರ ಅಪರಾಧ ಗುಪ್ತವಾರ್ತೆ ವಿಭಾಗದ ಪೊಲೀಸ್ ಚಂದ್ರಶೇಖರ ಅವರಿಗೆ ಅಭಿನಂದನೆ ಕೋರಿ ದೊಡ್ಡ ಪ್ಲೆಕ್ಸ್ ಹಾಕಿದ್ದಾರೆ. ಅವರಿಗೆ ಇತ್ತೀಚೆಗೆಮುಖ್ಯಮಂತ್ರಿ ಪದಕ ಲಭಿಸಿತ್ತು. ಆದರೆ ಪ್ಲೆಕ್ಸ್ಗೆ ಯಾವುದೇ ಹಾನಿಯಾಗಿಲ್ಲ. ದುಷ್ಕರ್ಮಿಗಳು ಪೊಲೀಸರ ಮೇಲಿನ ಭಯ, ಭಕ್ತಿಯಿಂದ ಬಿಟ್ಟರೋ ಅಥವಾ ದುಷ್ಕರ್ಮಿಗಳಿಗೆ ಜನಪ್ರಿಯ ಸಚಿವರು ಇಷ್ಟವಾಗದೆ, ಪೊಲೀಸರೇ ಹೆಚ್ಚು ಜನಪ್ರಿಯರೆನಿಸಿದರೋ ಗೊತ್ತಿಲ್ಲ.

