ನನ್ನೊಂದಿಗೆ ದೈವ ಶಕ್ತಿ ಇದೆ, ನನ್ನ ಅವಧಿಯಲ್ಲಿ ಸುಭದ್ರ ಆಡಳಿತ ನೀಡಿದ್ದೆ: ಮಾಜಿ ಪ್ರಧಾನಿ ದೇವೇಗೌಡ -Vishwanews24
ವಿಜಯಪುರ: ನನ್ನನ್ನು ವಿರೋಧಿಸಿದವರು ಸ್ವರ್ಗದಲ್ಲಿದ್ದಾರೆ. ನನ್ನೊಂದಿಗೆ ದೈವ ಶಕ್ತಿ ಇದೆ ಎಂದು ಮಾಜಿ ಪ್ರಧಾನಿ ದೇವೇಗೌಡರು ವಿಜಯಪುರದಲ್ಲಿ ಹೇಳಿದ್ದಾರೆ.
ಮೋದಿ ತನ್ನ ಸ್ಥಾನದ ಗೌರವ ಬಿಟ್ಟು ಮಾತಾಡುತ್ತಾರೆ ನಾನೊಬ್ಬನೇ ಸ್ಟ್ರಾಂಗ್ ಅನ್ನೋ ಥರ ಮಾತಾಡುತ್ತಾರೆ. ನನ್ನ ಅವಧಿಯಲ್ಲಿ ಇದಕ್ಕಿಂತಲೂ ಸುಭದ್ರ ಆಡಳಿತ ನೀಡಿದ್ದೆ. ಇತಿಹಾಸ ತಿರುಚಲು ಆಗಲ್ಲ. ರಾಷ್ಟ್ರದ ದೃಷ್ಟಿಯಿಂದ ಮೋದಿ ಆಡಳಿತ ಸರಿಯಿಲ್ಲ. ಬಹುಮತ ಇದ್ದರೂ ಮೋದಿ ಸರಿಯಾದ ಆಡಳಿತ ನೀಡಲಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆರೋಪಿಸಿದರು.
ಇನ್ನು, ಜೆಡಿಎಸ್ ಎಂದೂ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿಲ್ಲ. ಇದೊಂದು ಕುತಂತ್ರ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಬರಬಾರದೆಂಬ ಕಾರಣಕ್ಕೆ ಹೆಣೆದ ಕುತಂತ್ರ. ಅಲ್ಲದೆ, ನನ್ನ ವಿರೋಧ ಮಾಡಿದವರು ಎಲ್ಲರೂ ಸ್ವರ್ಗದಲ್ಲಿದ್ದಾರೆ. ನಾನಿನ್ನೂ ಜೀವಂತ ಇದ್ದೇನೆ. ನನ್ನೊಂದಿಗೆ ದೈವ ಶಕ್ತಿ ಇದೆ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗೆ ಆದ್ಯತೆ ನೀಡಿದ್ದೇ ನಾನು ಎಂದರು.
ಮಾಯಾವತಿ, ಮಮತಾ ಬ್ಯಾನರ್ಜಿ, ಶರದ್ ಪವಾರ್, ಚಂದ್ರಬಾಬು ನಾಯ್ಡು ಇನ್ನೂ ಅನೇಕರು ಪ್ರಧಾನಿಯಾಗುವ ಅರ್ಹತೆ ಹೊಂದಿದ್ದಾರೆ. ನಾನು ಪ್ರಧಾನಿ ಆಕಾಂಕ್ಷಿ ಅಲ್ಲ. ಕಾಂಗ್ರೆಸ್ ಬೆಂಬಲವಿಲ್ಲದೇ ಪ್ರಧಾನಿ ಆಗಲು ಸಾಧ್ಯವಿಲ್ಲ. ನಾವು ಈಗಾಗಲೇ ರಾಹುಲ್ ಗಾಂಧಿ ಅವರಿಗೆ ಬೆಂಬಲ ಸೂಚಿಸಿರುವುದಾಗಿ ಹೇಳಿದ್ದೇನೆ ಎಂದೂ ವಿಜಯಪುರದಲ್ಲಿ ದೇವೇಗೌಡರು ಹೇಳಿದರು.
