ನಾನು ಕಾಂಗ್ರೇಸ್ಸಿಗ, ಮಿಥುನ್ ನ ಜೊತೆಯಾಗಿ ಸಾಗುತ್ತೇನೆ :ಜನಾರ್ಧನ ಪೂಜಾರಿ – Vishwanews24
ಮಂಗಳೂರು :ಗೆಲ್ಲುವ ಅಭ್ಯರ್ಥಿಯನ್ನು ಕಾಂಗ್ರೇಸ್ಸ್ ಪಕ್ಷ ಆಯ್ಕೆ ಮಾಡಿದೆ. ಯುವಕರಿಗೆ ಅವಕಾಶ ಕೊಡಲು ನನಗೆ ದೇವರ ಆದೇಶ ಬಂದಿದೆ. ಕಾಂಗ್ರೇಸ್ ಪಕ್ಷವು ಅಳೆದು – ತೂಗಿ – ಅರೆದು ಸಮರ್ಥ ಯುವ ನಾಯಕನನ್ನು ಆರಿಸಿದೆ. ಮಿಥುನ್ ಗೆಲ್ಲುತ್ತಾರೆ ಎಂದು ನನಗೆ ನಿನ್ನೆ ರಾತ್ರಿ ಕುದ್ರೋಳಿ ಗೋಕರ್ಣಾಥೇಶ್ವರ ಕನಸಿನಲ್ಲಿ ಬಂದು ಹೇಳಿ ಹೋಗಿದ್ದಾರೆ ಎಂದು ಜಿಲ್ಲೆಯ ಹಿರಿಯ ಕಾಂಗ್ರೇಸ್ ನಾಯಕ ಜನಾರ್ಧನ ಪೂಜಾರಿ ಹೇಳಿದರು.
ನಾಮಪತ್ರ ಸಲ್ಲಿಸುವ ಮೊದಲು ಕಾಂಗ್ರೆಸ್ ಪಕ್ಷದ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ದೇವಸ್ಥಾನ – ಮಸೀದಿ – ಚರ್ಚುಗಳಿಗೆ ಭೇಟಿ ಕೊಟ್ಟಿದ್ದು, ನಂತರ ಅವರು ಜನಾಧನ ಪೂಜಾರಿಯವರ ಆಶಿರ್ವಾದ ಪಡೆಯಲು ಮತ್ತು ಪೂಜೆ ನೆರವೇರಿಸಲು ಕುದ್ರೋಳಿ ಗೂಕರ್ಣನಾಥೇಶ್ವರ ದೇಗುಲಕ್ಕೆ ಆಗಮಿಸಿದ್ದರು.
ಈ ಸಂದರ್ಭ ಮಾತನಾಡಿದ ಜನಾರ್ದನ ಪೂಜಾರಿ ಅವರು, ನನಗೆ ಅಹಂಕಾರ ಬಂದಿದೆ ಎಂದು ದೇವರು ಎಚ್ಚರಿಸಿದ್ದಾನೆ. ನಿನ್ನೆ ನಳಿನ್ ಕುಮಾರ್ ಕಟೀಲ್ ಗೆಲ್ಲುತ್ತೇನೆ ಎಂದು ಹೇಳಿದ್ದೆ. ನಾನು ನಳಿನ್ ಗೆ ಹಿರಿಯನಾಗಿ ಕೊಟ್ಟ ಆಶಿರ್ವಾದ. ಅದನ್ನು ನಾನು ಈ ಮೊದಲು 2 ಬಾರಿ ಕೊಟ್ಟಿದ್ದೇನೆ. ನಾನು ಕಾಂಗ್ರೆಸ್ ಪಕ್ಷದವ. ನಾನು ಮಿಥುನ್ ಜೊತೆಯಾಗಿ ಸಾಗುತ್ತೇನೆ. ಗೆಲುವು ಖಂಡಿತಾ ಮಿಥುನ್ ಗೆ ಒಲಿದು ಬರುತ್ತದೆ ಎಂದು ಅಭಿಪ್ರಾಯಪಟ್ಟರು.
