ನಿಜವಾದ ಚೌಕಿದಾರ ನಾನು ; ನನಗೆ ಗೆಲ್ಲುವ ವಿಶ್ವಾಸವಿದೆ : ಮೋದಿ ಎದುರಾಳಿ ತೇಜ್ ಬಹದ್ದೂರ್ ಯಾದವ್ -Vishwanews24
ವಾರಾಣಸಿ:ನನಗೆ ಜಯ ಸಾಧಿಸುವ ಸಂಪೂರ್ಣ ವಿಶ್ವಾಸವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕಣಕ್ಕಿಳಿದಿರುವ ಮಾಜಿ ಬಿಎಸ್ ಎಫ್ ಯೋಧ ತೇಜ್ ಬಹದೂರ್ ಹೇಳಿಕೆ ನೀಡಿದ್ದಾರೆ
ಸಮಾಜವಾದಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಮಾಜಿ ಸೈನಿಕ ತೇಜ್ ಬಹದ್ದೂರ್ ಯಾದವ್, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾರಣಾಸಿಯಿಂದ ಸ್ಪರ್ಧಿಸಲು ಕಣಕ್ಕಿಳಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಿಜವಾದ ಚೌಕಿದಾರ. 21 ವರ್ಷ ದೇಶದ ಗಡಿಯಲ್ಲಿದ್ದು ರಕ್ಷಣೆ ಮಾಡಿದ್ದೇನೆ. ಹೀಗಾಗಿ ತಾವೇ ನಿಜವಾದ ಚೌಕಿದಾರ ಎಂದು ಹೇಳಿದ್ದಾರೆ.
ಈ ಹಿಂದೆ ನಾನು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದೇನೆ. ಚೌಕಿದಾರ ಎಂಬ ಪದ ಮೋದಿ ಅವರಿಗೆ ಹೊಂದಿಕೆಯಾಗುವುದಿಲ್ಲ. ನಾನು ಯಾವುದೇ ಪಕ್ಷದ ಗುಲಾಮನಾಗಲು ಬಯಸುವುದಿಲ್ಲ. ಹೀಗಾಗಿ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ. ಜಯಗಳಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ನಮ್ಮ ವಿಚಾರಗಳು ಸೈನಿಕರು, ರೈತರು ಮತ್ತು ಯುವಜನತೆಯ ಉದ್ಯೋಗಕ್ಕೆ ಸಂಬಂಧಿಸಿದ್ದಾಗಿವೆ. ಜನತೆ ಯಾರು ನಿಜವಾದ ಚೌಕೀದಾರ್ ಎನ್ನುವುದನ್ನು ನಿರ್ಣಯಿಸುತ್ತಾರೆ ಎಂದು ಎಎನ್ಐಗೆ ಹೇಳಿಕೆ ನೀಡಿದ್ದಾರೆ.
