ಪಡುಬಿದ್ರಿಯ ಪ್ರಪ್ರಥಮ ಕೃಷಿ ಮೇಳ ಉದ್ಘಾಟಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ : vishwanews24
ಪಡುಬಿದ್ರಿಯ ಪ್ರಪ್ರಥಮ ಕೃಷಿ ಮೇಳ ಉದ್ಘಾಟಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ : vishwanews24
ಕೃಷಿಯೆಂದರೆ ಕೀಳರಿಮೆ ಬೇಡ- ಅದು ನಿರುದ್ಯೋಗ ನಿರ್ಮೂಲನೆಗೆ ನಾಂದಿಯಾಗಲಿ ..
ಕಾಪು : ಪಡುಬಿದ್ರಿ ಶ್ರೀ ಬಾಲ ಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನ ಹಾಗೂ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಇವರ ಜಂಟಿ ಸಹಯೋಗದೊಂದಿಗೆ ಪಡುಬಿದ್ರಿಯಲ್ಲಿ ಪ್ರಪ್ರಥಮ ಬಾರಿಗೆ ಕೃಷಿ ಮೇಳ ಕಾರ್ಯಕ್ರಮ ಶನಿವಾರ ಉದ್ಘಾಟನೆಗೊಂಡಿತು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ” ಒಂದು ಕಾಲದಲ್ಲಿ ಮನೆಗೊಂದು ಕಲ್ಪವೃಕ್ಷ ಕಾಮಧೇನು ಇರಬೇಕೆಂದು ಹಿರಿಯರು ಮಾಡಿರುವವ ಸಂಪ್ರದಾಯ ಕೃಷಿಯೇ ಆ ಕಾಲದಲ್ಲಿ ಜೀವನವಾಗಿತ್ತು ಆದರೇ ಇಂದಿನ ಕಾಲಘಟ್ಟದಲ್ಲಿ ಎಲ್ಲಾವೂ ಬದಲಾಗಿದೆ ಆಧುನಿಕ ಜೀವನಕ್ಕೆ ಬೇಕಾಗುವ ಸವಲತ್ತುಗಳು ಮನೆಯಂಗಳದಲ್ಲಿದೆ ಅದರ ನಡುವೆ ನೂರಾರು ವಿದ್ಯಾರ್ಥಿಗಳ ಕೂಡುವಿಕೆಯೊಂದಿಗೆ ನಡೆಯುತ್ತಿರುವ ಈ ಕೃಷಿ ಮೇಳ ಮುಂದಿನ ಜನಾಂಗಕ್ಕೆ ಕೃಷಿಯ ಮಹತ್ವದ ಸಂದೇಶ ಸಾರುವಂತಿದೆ ಎಂದರು.

ಜೈನ ಮಠ ಮೂಡಬಿದಿರೆ ಭಾರತಭೂಷಣ ಡಾ.ಸ್ವಸ್ತಿಶ್ರೀ ಚಾರುಕೀರ್ತಿವ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರು ಆಶೀರ್ವಚನ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲಾಲಾಜಿ ಆರ್ ಮೆಂಡನ್,ಕೀಶೋರ್ ಆಳ್ವಾ,ವೈ ಸುಧೀರ್ ಕುಮಾರ್,ಮೋಹನ್ ರಾಜ್,ಎಲ್ ಹೇಮಂತ ಕುಮಾರ್,ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಶ್ರೀಮತಿ ಶಶಿಕಲ,ಪ್ರಸನ್ನ,ಸೌಮ್ಯಲತ ಶೆಟ್ಟಿ, ರೇಶ್ಮ ಮೆಂಡನ್,ರಾಯೇಶ್ ಪೈ,ಮೋಹನ್ ಸುವರ್ಣ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಶಿಕಾಂತ್ ಪಡುಬಿದ್ರಿ ಸ್ವಾಗತಿಸಿ, ದೇವಾನಂದ್ ಭಟ್ ಕಾರ್ಯಕ್ರಮ ನಿರೂಪಿಸಿ ಶ್ರೀಮತಿ ಶರಾವತಿ ಆರ್ ರಾವ್ ವಂದಿಸಿದರು.
