ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ: ಸಹಕಾರ ಸಂಗಮ- ಸಮೃದ್ಧಿ ಸಂಭ್ರಮ ಉದ್ಘಾಟನೆ- ನೂರು ಕೋಟಿ ಠೇವಣಿಯ ಗುರಿಸಾಧನೆಯ ಅಮೃತಕ್ಷಣ: vishwanews24

Featured, ಉಡುಪಿ

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ: ಸಹಕಾರ ಸಂಗಮ- ಸಮೃದ್ಧಿ ಸಂಭ್ರಮ ಉದ್ಘಾಟನೆ- ನೂರು ಕೋಟಿ ಠೇವಣಿಯ ಗುರಿಸಾಧನೆಯ ಅಮೃತಕ್ಷಣ

ಕಾಪು: ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಶತಕೋಟಿ ಠೇವಣಿಯ ಗುರಿ ಸಾಧನೆಯ ಸಹಾಕರಿ ಸಂಗಮ- ಸಮೃದ್ಧಿ ಸಂಭ್ರಮ ಇದರ ಸಭಾಕಾರ್ಯಕ್ರಮದ ಉದ್ಘಾಟನೆ ಪಡುಬಿದ್ರಿ ಬಂಟರ ಸಂಘದ ಬಂಟರಭವನ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ ಎಮ್ ರಾಜೇಂದ್ರ ಕುಮಾರ್ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷ ವೈ ಸುಧಿರ್ ಕುಮಾರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಾಪ,ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಅಖಿಲ ಭಾರತ ಬಿಲ್ಲವರ ಯೂನಿಯನ್ ಕುದ್ರೋಳಿ ಮಂಗಳೂರು ಅಧ್ಯಕ್ಷ ನವೀನ್ಚಂದ್ರ ಡಿ ಸುವರ್ಣ, ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿರ್ದೇಶಕ ಇಂದ್ರಾಳಿ‌ ಜಯಕರ ಶೆಟ್ಟಿ,ಮಂಜುನಾಥ ಎಸ್ ಕೆ,ಪ್ರವೀಣ್ ಬಿ ನಾಯಕ್,ಗಣೇಶ್ ಮಯ್ಯ,ಅರುಣ್ ಕುಮಾರ್ ಎಸ್.ವಿ,ರವಿ ಶೆಟ್ಟಿ, ಡಾ.ಬೆಳಪು ದೇವಿಪ್ರಸಾದ್ ಶೆಟ್ಟಿ, ಅಶೋಕ್ ಶೆಟ್ಟಿ ಬೆಳ್ಳಂಪಳ್ಳಿ,ರಾಜೇಶ್ ರಾವ್ ಇನ್ನಂಜೆ ,ಗುರುರಾಜ್ ಪೂಜಾರಿ, ಪಿ.ಎಸ್ ರವೀಂದ್ರ ರಾವ್, ಸೊಸೈಟಿ ನಿರ್ದೇಶಕರು,ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಶ್ರೀಮತಿ ನಿಶ್ಮಿತಾ ಪಿ.ಎಚ್.ಉಪಸ್ಥಿತರಿದ್ದರು.ತೇಜಸ್ ಮತ್ತು ದಯಾನಂದ ಡಿ ಕಾರ್ಯಕ್ರಮ ನಿರೂಪಿಸಿದರು.


Leave a Reply