ಪಾಕ್​ ಆಕ್ರಮಿತ ಕಾಶ್ಮೀರದ ಸಮಸ್ಯೆಗಳನ್ನ ಕೂಡ ನಾವೇ ಶೀಘ್ರವಾಗಿ ಪರಿಹಾರ ಮಾಡುತ್ತೇವೆ : ಶಾಹಿದ್​ ಅಫ್ರಿದಿಗೆ ಗಂಭೀರ್​ ತಿರುಗೇಟು -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ:ಜಮ್ಮುಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದು ಮಾಡುವುದಾಗಿ ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಘೋಷಣೆ ಮಾಡಿದ ಬೆನ್ನಲ್ಲೇ ಶಾಹಿದ್​ ಅಫ್ರಿದಿ ಇದನ್ನು ವಿರೋಧಿಸಿದ್ದರು.

ಜಮ್ಮುಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿ ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಘೋಷಣೆ ಮಾಡಿದ ಬೆನ್ನಲ್ಲೇ ಶಾಹಿದ್ ಆಫ್ರಿದಿ ಇದನ್ನು ವಿರೋಧಿಸಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ಗೌತಮ್​ ಗಂಭೀರ್​, ಶಾಹಿದ್​ ಅಫ್ರಿದಿ ಸರಿಯಾಗಿಯೇ ಹೇಳಿದ್ದಾರೆ. ಅಲ್ಲಿ ಅಪ್ರಚೋದಿತ ಆಕ್ರಮಣ ನಡೆಯುತ್ತದೆ, ಮನುಷ್ಯತ್ವಕ್ಕೆ ವಿರುದ್ಧವಾದ ಹಲವು ಅಪರಾಧಗಳು ಇವೆ. ಅದನ್ನೆಲ್ಲ ಬೆಳಕಿಗೆ ತಂದಿದ್ದಕ್ಕೆ ಅಫ್ರಿದಿಯವರನ್ನು ಶ್ಲಾಘಿಸಬೇಕು. ಆದರೆ, ಅಫ್ರಿದಿ ಹೇಳಿದ ಎಲ್ಲ ಅಂಶಗಳೂ ಅಸ್ತಿತ್ವದಲ್ಲಿ ಇರುವುದು ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು. ಯೋಚಿಸಬೇಡಿ, ಅದನ್ನೂ ಕೂಡ ನಾವೇ ಶೀಘ್ರವಾಗಿ ಪರಿಹಾರ ಮಾಡುತ್ತೇವೆ ಎಂದು ಗಂಭೀರ್​ ತಿರುಗೇಟು ನೀಡಿದ್ದಾರೆ.