ಪಿಲಿಕೋಲ ದೈವನರ್ತಕ ಮೂಳೂರು ಗುಡ್ಡಪಾನರ ರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ : ಶ್ರಮ ವಹಿಸಿದ ಸರ್ವೇಶ್ವರ ಫ್ರೆಂಡ್ಸ್ ಮೂಳೂರು ಇವರ ವತಿಯಿಂದ ಗೌರವ ಅರ್ಪಣೆ :vishwanews24

Featured, ಉಡುಪಿ

ದೈವನರ್ತಕ ಗುಡ್ಡಪಾನರ ರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ : ಶ್ರಮ ವಹಿಸಿದ ಸರ್ವೇಶ್ವರ ಫ್ರೆಂಡ್ಸ್ ಮೂಳೂರು ಇವರ ವತಿಯಿಂದ ಗೌರವ ಅರ್ಪಣೆ :vishwanews24

ಕಾಪು:  ಪಿಲಿಕೋಲ  ದೈವ ನರ್ತಕ ಗುಡ್ಡಪಾನರ ಇವರಿಗೆ ಜಾನಪದ ವಿಭಾಗದಲ್ಲಿ 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾಗಿದ್ದು ಈ ಪ್ರಶಸ್ತಿಯ ಹಿಂದೆ ಶ್ರಮ ವಹಿಸಿದ ಮೂಳೂರು ಸರ್ವೇಶ್ವರ ಫ್ರೆಂಡ್ಸ್ ಇವರ ವತಿಯಿಂದ ಆದಿತ್ಯವಾರ ಗೌರವರ್ಪಣೆ ನಡೆಯಿತು.


ಗೌರವ ಸ್ವೀಕರಿಸಿ ಮಾತನಾಡಿದ ಗುಡ್ಡಪಾನರ ” ಈ ಪ್ರಶಸ್ತಿಯ ಹಿಂದೆ ಡಾ. ವೈ ಎನ್ ಶೆಟ್ಟಿ ಮತ್ತು ಕಿಶನ್ ಶೆಟ್ಟಿ ಬಿಕ್ರಿಗುತ್ತು ಹಾಗೂ ನಮ್ಮ ಊರಿನ ಗ್ರಾಮಸ್ಥರಾದ ಸರ್ವೇಶ್ವರ ಫ್ರೆಂಡ್ಸ್ ನ ಎಲ್ಲಾ ಯುವಕರು ಶ್ರಮವಹಿಸಿದ್ದು ಈ ಪ್ರಶಸ್ತಿಯ ಹಿಂದಿನ ಶ್ರಮ ಅಪಾರವಾಗಿದೆ , ನನ್ನ ಈ ಸೇವೆಯನ್ನ ಗುರುತಿಸಿ ಸರ್ಕಾರ ಈ ಪ್ರಶಸ್ತಿ ನೀಡಿರುವುದು ಅತ್ಯಂತ ಸಂತಸವಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ವೀರ ಕೇಸರಿ ಶೆಟ್ಟಿ, ಉದ್ಯಮಿ ಸಂಜೀವ ಅಮಿನ್, ಚಿತ್ತನ್ ಪೂಜಾರಿ ಮೂಳೂರು,ಸುದರ್ಶನ್,ಕಿಶೋರ್ ಪೂಜಾರಿ,ಮೊದಲಾದವರು ಉಪಸ್ಥಿತರಿದ್ದರು.

Leave a Reply