ಪಿ.ಚಿದಂಬರಂಗೆ ಆದ ಗತಿ ನಿಮಗೂ ಬರುತ್ತದೆ : ದೀದಿಗೆ ಎಚ್ಚರಿಕೆ ನೀಡಿದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ -Vishwanews24

Featured, ರಾಷ್ಟ್ರ ನ್ಯೂಸ್

ಬಲಿಯಾ(ಉ.ಪ್ರ), – ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈಗ ತಿಹಾರ್ ಜೈಲಿನಲ್ಲಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂಗೆ ಆದ ಗತಿ ನಿಮಗೂ ಬರುತ್ತದೆ ಎಂದು ಉತ್ತರಪ್ರದೇಶ ಬಿಜೆಪಿ ಶಾಸಕ ಸುರೇಂದ್ರ ಸಿಂಗ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಎಚ್ಚರಿಕೆ ನೀಡಿದ್ದಾರೆ.

ಉತ್ತರಪ್ರದೇಶ ಬಲಿಯಾ ವಿಧಾನಸಭಾ ಕ್ಷೇತ್ರದ ಸದ್ಯಸ ಸುರೇಂದ್ರ ಸಿಂಗ್, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಈ ಎಚ್ಚರಿಕೆ ನೀಡಿದ್ದಾರೆ. ನೀವು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ವಿರೋಧಿಸುತ್ತಿದ್ದೀರಿ.

ನೀವು ಭಾರತದಲ್ಲಿದ್ದೀರೋ ಅಥವಾ ಬಾಂಗ್ಲಾ ದೇಶದಲ್ಲಿದ್ದೀರೋ ಪ್ರಶ್ನಿಸಿರುವ ಸಿಂಗ್ ಇತ್ತೀಚೆಗೆ ನಿಮಗೆ ಬಾಂಗ್ಲಾ ದೇಶದ ಮೇಲೆ ಮಮಕಾರ ಹೆಚ್ಚಾಗಿದೆ. ನೀವು ಆ ದೇಶಕ್ಕೆ ಹೋಗಿ ಬಾಂಗ್ಲಾ ದೇಶದ ಪ್ರಧಾನಿಯಾಗಿ ಎಂದು ಶಾಸಕರು ವ್ಯಂಗ್ಯ ಮಿಶ್ರಿತ ಸಲಹೆ ಮಾಡಿದ್ದಾರೆ.