ಪುತ್ತೂರು: ದ.ಕ. ಬಿಜೆಪಿಯ ಭೀಷ್ಮ ಮಾಜಿ ಶಾಸಕ ರಾಮ್ ಭಟ್ ಪಾರ್ಥಿವ ಶರೀರದ ಅಂತಿಮ ನಮನ ; ಪ್ರಧಾನಿಯಿಂದ ಸಂತಾಪ – VIshwanews24
ಪುತ್ತೂರು: ದ.ಕ. ಬಿಜೆಪಿಯ ಭೀಷ್ಮ ಮಾಜಿ ಶಾಸಕ ರಾಮ್ ಭಟ್ ಪಾರ್ಥಿವ ಶರೀರದ ಅಂತಿಮ ನಮನ ; ಪ್ರಧಾನಿಯಿಂದ ಸಂತಾಪ – VIshwanews24
ಪುತ್ತೂರು: ದ.ಕ. ಬಿಜೆಪಿಯ ಭೀಷ್ಮ, ಪುತ್ತೂರಿನ ಮಾಜಿ ಶಾಸಕ ಉರಿಮಜಲು ರಾಮ್ ಭಟ್(92) ಸೋಮವಾರ ನಿಧನರಾಗಿದ್ದು, ಅವರ ಪಾರ್ಥಿವ ಶರೀರವನ್ನು ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಆರ್ಎಸ್ಎಸ್ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸೇರಿ ಹಲವು ಗಣ್ಯರಿಂದ ಅಂತಿಮ ದರ್ಶನ ಪಡೆದಿದ್ದು, ನಿನ್ನೆ ರಾತ್ರಿ ಸಂಸದ ನಳಿನ್ ಕಟೀಲ್, ಎಸ್.ಅಂಗಾರ ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಸಂಘ ಪರಿವಾರದ ಮುಖಂಡರು ಭಾಗಿಯಾಗಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಜನಸಂಘ ಮತ್ತು ಬಿಜೆಪಿಯ ಇತಿಹಾಸದಲ್ಲಿ ರಾಮ್ ಭಟ ಅವರಂತಹ ದಿಗ್ಗಜರಿಗೆ ವಿಶೇಷ ಸ್ಥಾನಮಾನವಿದೆ. ಅವರ ಕರ್ನಾಟಕದಲ್ಲಿ ಬಿಜೆಪಿಯನ್ನು ಬಲಪಡಿಸಲು ಶ್ರಮಿಸಿದವರು ಮತ್ತು ಜನರೊಂದಿಗೆ ದಣಿವಿಲ್ಲದೆ ಸೇವೆ ಸಲ್ಲಿಸಿದವರು. ಅವರ ನಿಧನದಿಂದ ದುಖಃವಾಗಿದೆ ಓಂ ಶಾಂತಿ ಎಂದು ಬರೆದುಕೋಂದಿದ್ದಾರೆ.
In the history of the Jana Sangh and BJP, stalwarts like Urimajalu K. Rama Bhat Ji have a special place. He assiduously worked to strengthen our Party in Karnataka and served tirelessly among people. I am saddened by his demise. Condolences to his family. Om Shanti.
— Narendra Modi (@narendramodi) December 7, 2021
ಇನ್ನು ರಾಮ್ ಭಟ್ ವಯೋಸಹಜ ಆನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ಜನಸಂಘದ ಪ್ರಭಾವಿ ನಾಯಕರಾಗಿ ರಾಮ ಭಟ್ ಗುರಿತಿಸಿಕೊಂಡಿದ್ದರು. ಪಕ್ಷ ಸಂಘಟನೆಯಲ್ಲಿ ಪ್ರಮುಖರಾಗಿದ್ದರು.
ಕೊರೊನಾ ಆತಂಕ : ಶಾಲೆಗಳಿಗೆ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ – Vishwanews24
